ಏಷ್ಯಾ ಕಪ್ ಸೋತ ಬೆನ್ನಲ್ಲೇ ಭಾರತೀಯ ಪತ್ರಕರ್ತನ ಮೇಲೆ ಪಿಸಿಬಿ ಅಧ್ಯ ಕ್ಷ ರಮೀಜ್ ರಾಜಾ ದುಂಡಾವರ್ತನೆ

ಸೋಮವಾರ, 12 ಸೆಪ್ಟಂಬರ್ 2022 (10:05 IST)
ದುಬೈ: ಏಷ್ಯಾ ಕಪ್ ನಲ್ಲಿ ಶ್ರೀಲಂಕಾ ವಿರುದ್ಧ ಫೈನಲ್ ನಲ್ಲಿ 23 ರನ್ ಗಳ ಸೋಲುಂಡ ಬಳಿಕ ಹತಾಶೆಗೊಳಗಾದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ರಮೀಜ್ ರಾಜಾ ಭಾರತೀಯ ಪತ್ರಕರ್ತನ ಮೇಲೆ ದುಂಡಾವರ್ತನೆ ತೋರಿದ್ದಾರೆ.

ಪಾಕ್ ಸೋಲಿನ ಬಳಿಕ ರಮೀಜ್ ರಾಜಾರನ್ನು ಪತ್ರಕರ್ತರು ಪ್ರಶ್ನೆ ಮಾಡಿದ್ದಾರೆ. ಈ ಪೈಕಿ ಭಾರತೀಯ ಪತ್ರಕರ್ತರೊಬ್ಬರು, ಪಾಕಿಸ್ತಾನ ಜನ ಈ ಸೋಲಿನಿಂದ ಬೇಸರಗೊಂಡಿದ್ದಾರೆ. ಅವರಿಗೆ ಏನು ಹೇಳಲು ಬಯಸುತ್ತೀರಿ ಎಂದು ಪ್ರಶ್ನಿಸಿದ್ದರು.

ಇದರಿಂದ ಕೋಪಗೊಂಡ ರಮೀಜ್ ರಾಜಾ, ‘ನೀವು ಭಾರತೀಯ ಪತ್ರಕರ್ತ ಎನಿಸುತ್ತದೆ. ನಿಮಗೆ ತುಂಬಾ ಖುಷಿಯಾಗಿರಬಹುದು ಈಗ’ ಎಂದು ಕಿಡಿ ಕಾರಿದರು. ಬಳಿಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆ ಪತ್ರಕರ್ತನ ಫೋನ್ ಕಿತ್ತುಕೊಂಡಿದ್ದಾರೆ. ಬಳಿಕ ಅದನ್ನು ಆತನಿಗೆ ತಿರುಗಿಸಿ ಅಲ್ಲಿಂದ ತೆರಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ