ಟೀಂ ಇಂಡಿಯಾ ಸೋಲಿಗೆ ಕಾರಣ ತಿಳಿಸಿದ ಕೋಚ್ ದ್ರಾವಿಡ್

ಶುಕ್ರವಾರ, 9 ಡಿಸೆಂಬರ್ 2022 (09:00 IST)
Photo Courtesy: Twitter
ಢಾಕಾ: ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿ ಸೋಲಿಗೆ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಕಾರಣ ತಿಳಿಸಿದ್ದಾರೆ.

ಬಾಂಗ್ಲಾ ವಿರುದ್ಧ ಎರಡು ಏಕದಿನ ಪಂದ್ಯಗಳನ್ನು ಸೋತು ಸರಣಿ ಕಳೆದುಕೊಂಡ ಬಳಿಕ ಟೀಂ ಇಂಡಿಯಾ ಭಾರೀ ಟೀಕೆಗೆ ಗುರಿಯಾಗಿದೆ. ದುರ್ಬಲ ತಂಡದ ವಿರುದ್ಧ ಸರಣಿ ಸೋತಿದ್ದರ ಬಗ್ಗೆ ಕೋಚ್ ದ್ರಾವಿಡ್ ಮಾಧ‍್ಯಮಗಳ ಮುಂದೆ ಮಾತನಾಡಿದ್ದಾರೆ.

ಈ ವೇಳೆ ಅವರು ಸೋಲಿನ ಕಾರಣ ವಿವರಿಸಿದ್ದಾರೆ. ‘ಟೀಂ ಇಂಡಿಯಾ ಕಳೆದ ಕೆಲವು ಸಮಯದಿಂದ ಕೇವಲ ಟಿ20 ಕ್ರಿಕೆಟ್ ಕಡೆಗೆ ಗಮನ ನೀಡಿತ್ತು. ಏಕದಿನ ಪಂದ್ಯಗಳನ್ನು ಆಡಿದ್ದೇ ಕಡಿಮೆ. ಹೀಗಾಗಿ ಈಗ ಏಕದಿನ ಪಂದ್ಯಕ್ಕೆ ಹೊಂದಿಕೊಳ್ಳಲು ಕಷ್ಟವಾಗಿದೆ. ಇದುವೇ ಸೋಲಿಗೆ ಕಾರಣವಾಗಿದೆ’ ಎಂದು ದ್ರಾವಿಡ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ