ರಣಜಿ ಟ್ರೋಫಿ ಕ್ರಿಕೆಟ್: ತವರಿನಲ್ಲಿ ಕರ್ನಾಟಕವನ್ನು ತಡೆಯೋರೇ ಇಲ್ಲ

ಬುಧವಾರ, 16 ಜನವರಿ 2019 (09:48 IST)
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎದುರಾಳಿ ರಾಜಸ್ಥಾವನ್ನು ಕರ್ನಾಟ ಮೊದಲ ಇನಿಂಗ್ಸ್ ನಲ್ಲಿ 224 ಕ್ಕೆ ಆಲೌಟ್ ಮಾಡಿದೆ.


ಇದಕ್ಕೆ ಉತ್ತರವಾಗಿ ಕರ್ನಾಟಕ ಮೊದಲ ಇನಿಂಗ್ಸ್ ಆರಂಭಿಸಿದ್ದು ಇತ್ತೀಚೆಗಿನ ವರದಿ ಬಂದಾಗ ವಿಕೆಟ್ ನಷ್ಟವಿಲ್ಲದೇ 17 ರನ್ ಗಳಿಸಿದೆ . ರಾಜ್ಯದ ವಿನಯ್ ಕುಮಾರ್, ಅಭಿಮನ್ಯು ಮಿಥುನ್ ಮತ್ತು ಗೌತಮ್ ದಾಳಿಗೆ ರಾಜಸ್ಥಾನ ದಿಂಡುರಳಿದೆ. ಕೆ ಗೌತಮ್ ಮತ್ತು ಮಿಥುನ್ ತಲಾ 3 ವಿಕೆಟ್ ಪಡೆದರೆ ವಿನಯ್ ಕುಮಾರ್ 2 ವಿಕೆಟ್ ಕಬಳಿಸಿದ್ದಾರೆ.

ಕರ್ನಾಟಕ ಪರ ಆರಂಭಿಕರಾದ ದೇಗಾ ನಿಶ್ಚಲ್ 6 ಮತ್ತು ರವಿಕಾಂತ್ ಸಮರ್ಥ್ 11 ರನ್ ಗಳಿಸಿ ಆಡುತ್ತಿದ್ದಾರೆ. ತವರಿನ ಬಲವಿರುವ ಕಾರಣ ಕರ್ನಾಟಕ ಇಂದೂ ಕೂಡಾ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ