ರಣಜಿ ಟ್ರೋಫಿ ಕ್ರಿಕೆಟ್: ಜತೆಯಾಟ ಸಿಕ್ಕರೆ ಕರ್ನಾಟಕಕ್ಕೆ ಗೆಲುವು ಖಚಿತ

ಗುರುವಾರ, 17 ಜನವರಿ 2019 (17:22 IST)
ಬೆಂಗಳೂರು: ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ರಾಜಸ್ಥಾನ ನೀಡಿದ 184 ರನ್ ಗಳ ಟಾರ್ಗೆಟ್ ಬೆನ್ನತ್ತಿದೆ.


ಮೂರನೇ ದಿನದಂತ್ಯಕ್ಕೆ ಕರ್ನಾಟಕಕ್ಕೆ ಗೆಲುವು ತೂಗುಯ್ಯಾಲೆಯಂತಾಗಿದೆ. ದ್ವಿತೀಯ ಇನಿಂಗ್ಸ್ ನಲ್ಲಿ ಆರಂಭಿಕ ಆಘಾತ ಅನುಭವಿಸಿರುವ ಕರ್ನಾಟಕ 3 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿದೆ. ಗೆಲುವಿಗೆ ಇನ್ನೂ 139 ರನ್ ಗಳಿಸಬೇಕಿದೆ.

ಕರ್ನಾಟಕ ಪರ ಆರಂಭಿಕರಾದ ದೇಗಾ ನಿಶ್ಚಲ್, ರವಿಕಾಂತ್ ಸಮರ್ಥ್ ತಲಾ 1 ಮತ್ತು 16 ರನ್ ಗಳಿಸಿ ಔಟಾದರು. ಕೆ ಸಿದ್ಧಾರ್ಥ್ ಕೂಡಾ ಕೇವಲ 5 ರನ್ ಗಳಿಗೆ ವಿಕೆಟ್ ಒಪ್ಪಿಸಿ ಕುಸಿತಕ್ಕೆ ಕಾರಣರಾದರು. ಇದೀಗ ಕರುಣ್ ನಾಯರ್ 18 ಮತ್ತು ರೋನಿತ್ ಮೋರೆ 8 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.  ಸಶಕ್ತ ಜತೆಯಾಟವಾಡಿದರೆ ಮಾತ್ರ ಗೆಲುವು ಸಾಧ್ಯ ಎಂಬ ಪರಿಸ್ಥಿತಿ ಕರ್ನಾಟಕಕ್ಕೆ ಎದುರಾಗಿದೆ. ನಾಳೆ ಒಂದು ದಿನದ ಆಟ ಬಾಕಿಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ