ಏಷ್ಯಾ ಕಪ್ ನಲ್ಲಿ ಕೆಎಲ್ ರಾಹುಲ್ ಗೆ ಅವಕಾಶ ನೀಡಬಾರದು: ರವಿಶಾಸ್ತ್ರಿ

ಬುಧವಾರ, 16 ಆಗಸ್ಟ್ 2023 (09:50 IST)
ಮುಂಬೈ: ಮುಂಬರುವ ಏಷ್ಯಾ ಕಪ್ ಕ್ರಿಕೆಟ್ ಗೆ ತಂಡದ ಟೀಂ ಇಂಡಿಯಾ ಇನ್ನೂ ಆಯ್ಕೆಯಾಗಿಲ್ಲ. ಅದಕ್ಕಿಂತ ಮೊದಲು ಮಾಜಿ ಕೋಚ್ ರವಿಶಾಸ್ತ್ರಿ ಮಹತ್ವದ ಹೇಳಿಕೆ ನೀಡಿದ್ದಾರೆ.

ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಫಿಟ್ನೆಸ್ ಫಲಿತಾಂಶಕ್ಕಾಗಿ ಆಯ್ಕೆಗಾರರು ಕಾಯುತ್ತಿದ್ದಾರೆ. ಈ ನಡುವೆ ರವಿಶಾಸ್ತ್ರಿ ಕೆಎಲ್ ರಾಹುಲ್ ರನ್ನು ಆಡುವ ಬಳಗದಲ್ಲಿ ಸೇರಿಸುವ ಅಗತ್ಯವಿಲ್ಲ ಎಂದಿದ್ದಾರೆ.

ರಾಹುಲ್ ತುಂಬಾ ಸಮಯದಿಂದ ಕ್ರಿಕೆಟ್ ಕಣದಿಂದ ದೂರವಿದ್ದಾರೆ. ಅವರ ಸ್ಥಾನದಲ್ಲಿ ಇದುವರೆಗೆ ಇಶಾನ್ ಕಿಶನ್ ಅವರನ್ನು ಆಡಿಸಲಾಗುತ್ತಿತ್ತು. ಇದೀಗ ನೇರವಾಗಿ ಏಷ್ಯಾ ಕಪ್ ನಲ್ಲಿ ರಾಹುಲ್ ರನ್ನು ಆಡುವ ಬಳಗದಲ್ಲಿ ಸೇರಿಸುವ ಬದಲು ಇಶಾನ್ ಕಿಶನ್ ರನ್ನೇ ಮುಂದುವರಿಸಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ