ಆರ್ ಸಿಬಿ ಸೋಲಿನ ಬಗ್ಗೆ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಪತ್ರ

ಮಂಗಳವಾರ, 23 ಮೇ 2023 (16:28 IST)
ಮುಂಬೈ: ಈ ಬಾರಿಯೂ ಐಪಿಎಲ್ ನಲ್ಲಿ ಆರ್ ಸಿಬಿ ಪ್ಲೇ ಆಫ್ ಹಂತಕ್ಕೇರಲೂ ವಿಫಲವಾಗಿದ್ದು, ಕೂಟದಿಂದ ಹೊರಬಿದ್ದಿದೆ. ಈ ಬಗ್ಗೆ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಪತ್ರ ಬರೆದಿದ್ದಾರೆ.

ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಭಾವುಕರಾಗಿ ಸಂದೇಶ ಬರೆದಿದ್ದು, ಸೋತರೂ ನಾವು ತಲೆ ತಗ್ಗಿಸಿಲ್ಲ. ತಲೆ ಎತ್ತಿ ಮುನ್ನಡೆಯುತ್ತೇವೆ ಎಂದಿದ್ದಾರೆ.

‘ಈ ಬಾರಿ ನಾವು ಉತ್ತಮ ಪ್ರದರ್ಶನ ನೀಡಿದರೂ ಗುರಿ ತಲುಪಲು ಎಳೆ ದೂರದಲ್ಲಿ ಎಡವಿದೆವು. ಇದು ಬೇಸರ ತಂದಿದೆ. ಆದರೆ ನಾವು ತಲೆ ಎತ್ತಿ ಮುನ್ನಡೆಯುತ್ತೇವೆ. ನಮ್ಮ ಪ್ರತೀ ಹಂತದಲ್ಲೂ ಬೆಂಬಲವಾಗಿ ನಿಲ್ಲು  ವಿಧೇಯ ಅಭಿಮಾನಿಗಳಿಗೆ ಧನ್ಯವಾದಗಳು. ಕೋಚ್ ಗಳು, ಮ್ಯಾನೇಜ್ ಮೆಂಟ್, ನನ್ನ ಸಹ ಆಟಗಾರರಿಗೆ ಧನ್ಯವಾದಗಳು. ಮತ್ತೆ ಪ್ರಬಲವಾಗಿ ಕಮ್ ಬ್ಯಾಕ್ ಮಾಡುತ್ತೇವೆ’ ಎಂದಿದ್ದಾರೆ ಕೊಹ್ಲಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ