ಆರ್ ಸಿಬಿ ತಂಡಕ್ಕೆ ಇನ್ನೂ ಯಾಕೆ ಬಂದಿಲ್ಲ ಸ್ಮೃತಿ ಮಂಧನಾ?

ಗುರುವಾರ, 2 ಮಾರ್ಚ್ 2023 (08:50 IST)
Photo Courtesy: Twitter
ಮುಂಬೈ: ಮಾರ್ಚ್ 4 ರಿಂದ ಆರಂಭವಾಗಲಿರುವ ಮಹಿಳಾ ಐಪಿಎಲ್ ಕೂಟದಲ್ಲಿ ಭಾಗಿಯಾಗಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಈಗಾಗಲೇ ಮುಂಬೈಗೆ ಬಂದಿಳಿದಿದೆ.

ಆದರೆ ಇನ್ನೂ ತಂಡದ ನಾಯಕಿ ಸ್ಮೃತಿ ಮಂಧನಾ ಇನ್ನೂ ತಂಡವನ್ನು ಕೂಡಿಕೊಂಡಿಲ್ಲ. ಹೀಗಾಗಿ ಫ್ಯಾನ್ಸ್ ಒಂದೇ ಸಮನೆ ಆರ್ ಸಿಬಿಯನ್ನು ಈ ಬಗ್ಗೆ ಪ್ರಶ್ನಿಸುತ್ತಲೇ ಇದ್ದಾರೆ.

ಸ್ಮೃತಿ ಯಾಕೆ ಇನ್ನೂ ತಂಡವನ್ನು ಕೂಡಿಕೊಂಡಿಲ್ಲ ಎಂದು ಅಭಿಮಾನಿಗಳು ಪ್ರಶ್ನಿಸುತ್ತಲೇ ಇದ್ದಾರೆ. ಈಗಾಗಲೇ ಹರ್ಮನ್ ಪ್ರೀತ್ ಮುಂಬೈ ತಂಡವನ್ನು ಕೂಡಿಕೊಂಡಿದ್ದಾರೆ. ಆದರೆ ಮಹಿಳಾ ಐಪಿಎಲ್ ನ ದುಬಾರಿ ಆಟಗಾರ್ತಿ, ಕ್ವೀನ್ ಸ್ಮೃತಿ ಮಂಧನಾ ಇನ್ನೂ ತಂಡಕ್ಕೆ ಬಾರದೇ ಇರುವುದರಿಂದ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಹೀಗಾಗಿ ಆರ್ ಸಿಬಿ ಇದಕ್ಕೆ ಪ್ರತಿಕ್ರಿಯಿಸಿದ್ದು, ಸ್ವಲ್ಪ ಸಮಾಧಾನವಾಗಿರಿ, ಸ್ಮೃತಿ ಬರುತ್ತಿದ್ದಾರೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ