ತನ್ನ ಬ್ಯಾಟಿಂಗ್ ಸಮಸ್ಯೆ ನಿವಾರಿಸಿಕೊಳ್ಳಲು ಕೋಚ್ ರವಿಶಾಸ್ತ್ರಿ ಮೊರೆ ಹೋದ ಧೋನಿ

ಭಾನುವಾರ, 7 ಜುಲೈ 2019 (09:35 IST)
ಲಂಡನ್: ವಿಶ್ವಕಪ್ ಕೂಟದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದು ರನ್ ಗಳಿಸಲು ಪರದಾಡುತ್ತಿರುವ ಧೋನಿ ತಮ್ಮ ಸಮಸ್ಯೆ ನಿವಾರಿಸಿಕೊಳ್ಳಲು ಕೋಚ್ ರವಿಶಾಸ್ತ್ರಿ ಮೊರೆ ಹೋಗಿದ್ದಾರೆ.


ನಿಧಾನಗತಿಯ ಮತ್ತು ಸ್ಪಿನ್ನರ್ ಗಳ ಎದುರು ರನ್ ಗಳಿಸಲು ಪರದಾಡುತ್ತಿರುವ ಧೋನಿ ಸಾಕಷ್ಟು ಟೀಕೆಗೊಳಗಾಗಿದ್ದಾರೆ. ಈಗ ವಿಶ್ವಕಪ್ ನ ನಿರ್ಣಾಯಕ ಹಂತದಲ್ಲಿದ್ದು, ಈಗಲಾದರೂ ಧೋನಿ ರನ್ ಗಳಿಸಲೇ ಬೇಕಾದ ಒತ್ತಡದಲ್ಲಿದ್ದಾರೆ.

ಹೀಗಾಗಿ ಶ್ರೀಲಂಕಾ ಪಂದ್ಯಕ್ಕೂ ಮೊದಲು ಧೋನಿ ರವಿಶಾಸ್ತ್ರಿ ಜತೆ ಸ್ಪಿನ್ನರ್ ಗಳನ್ನು ಎದುರಿಸುವ ಬಗ್ಗೆ ಪಾಠ ಹೇಳಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಸ್ಪಿನ್ನರ್ ಆಗಿಯೂ ಮಿಂಚಿದ್ದ ರವಿಶಾಸ್ತ್ರಿ ಧೋನಿಗೆ ಸ್ಪಿನ್ನರ್ ಗಳನ್ನು ಎದುರಿಸುವ ಬಗ್ಗೆ ಕೆಲಹೊತ್ತು ತರಬೇತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ