ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಒಂದೇ ದಿನ ಬಾಕಿ: ಗೆಲ್ಲುವ ನಾಯಕರ ಮೇಲೆ ಬಾಜಿ

ಬುಧವಾರ, 22 ಮೇ 2019 (08:54 IST)
ಬೆಂಗಳೂರು: ಲೋಕಸಭೆ ಚುನಾವಣೆ 2019 ರ ಫಲಿತಾಂಶಕ್ಕೆ ಇನ್ನು ಒಂದೇ ದಿನ ಬಾಕಿಯಿದ್ದು, ಪ್ರಮುಖ ಅಭ್ಯರ್ಥಿಗಳ ಕ್ಷೇತ್ರದಲ್ಲಿ ಗೆಲ್ಲುವವರು ಯಾರು ಎಂಬ ಬಗ್ಗೆ ಬೆಟ್ಟಿಂಗ್ ದಂಧೆ ಶುರುವಾಗಿದೆ.


ಮಂಡ್ಯ, ಹಾಸನ, ತುಮಕೂರು, ಮಂಗಳೂರು ಸೇರಿದಂತೆ ಜಿದ್ದಾಜಿದ್ದಿನ ಕಣದಲ್ಲಿ ಗೆಲ್ಲುವವರು ಯಾರು ಎಂಬ ಲೆಕ್ಕಾಚಾರ ಶುರುವಾಗಿದೆ.

ಮಂಗಳೂರಿನಲ್ಲಿ ಬೆಟ್ಟಿಂಗ್ ದಂಧೆ ಜೋರಾಗಿದ್ದು, ಅಭ್ಯರ್ಥಿಗಳ ಗೆಲುವು-ಸೋಲಿನ ಮೇಲೆ ಹಣ ಹೂಡಿಕೆ ಮಾಡಲಾಗುತ್ತಿದೆ. ಪ್ರಮುಖವಾಗಿ ಮಂಡ್ಯ ಕ್ಷೇತ್ರದ ಮೇಲೆ ಬಾಜಿ ಕಟ್ಟುವವರ ಕಣ್ಣು ಬಿದ್ದಿದೆ. ಇಲ್ಲಿ ಸುಮಲತಾ ಅಂಬರೀಶ್‍ ಮತ್ತು ಸಿಎಂ ಪುತ್ರ ನಿಖಿಲ್ ನಡುವೆ ಫೈಟ್ ಜೋರಾಗಿದ್ದು ಬಾಜಿಗಳ ಫೇವರಿಟ್ ತಾಣವಾಗಿದೆ. ನಾಳೆ ಫಲಿತಾಂಶ ಬಂದ ಬಳಿಕ ಬಾಜಿ ಕಟ್ಟಿ ಗೆದ್ದವನು ಗೆದ್ದ. ಸೋತವನು ಸತ್ತ ಎಂಬ ಪರಿಸ್ಥಿತಿಯಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ