ಹೃದಯ ರೋಗಗಳು ಬರದಂತೆ ತಡೆಯಲು ಈ ಬೀಜವನ್ನು ಸೇವಿಸಿ

ಬುಧವಾರ, 22 ಜನವರಿ 2020 (06:34 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಸಾಯುತ್ತಿರುವುದು ಹೃದಯಾಘಾತದಿಂದ. ಆದ್ದರಿಂದ ಹೃದಯ ರೋಗಗಳನ್ನು ನಿಮಗೆ ಬರದಂತೆ ತಡೆಯಲು ಈ ಬೀಜವನ್ನು ಸೇವಿಸಿ.

ಹೃದಯಾಘಾತ ಉಂಟಾಗಲು ಹೆಚ್ಚಾಗಿ ಕಾರಣ ಕೊಲೆಸ್ಟ್ರಾಲ್. ಈ ಕೊಲೆಸ್ಟ್ರಾಲ್ ನ್ನು ಕರಗಿಸಿದರೆ ನೀವು ಹೃದಯ ಸಮಸ್ಯೆಯಿಂದ ದೂರವಿರಬಹುದು. ಆದಕಾರಣ ಪ್ರತಿದಿನ ರಾತ್ರಿ 1 ಗ್ಲಾಸ್ ನೀರಿಗೆ ಅಗಸೆ ಬೀಜವನ್ನು ಹಾಕಿ ನೆನೆಸಿಟ್ಟು, ಬೆಳಿಗ್ಗೆ ಬೀಜವನ್ನು ತೆಗೆದು ಆ ನೀರನ್ನು ಕುಡಿಯಿರಿ. ಹಾಗೇ ಸಾಧ್ಯವಾದರೆ ಆ ಬೀಜವನ್ನು ತಿಂದರೆ ಇನ್ನು ಉತ್ತಮ. ಹೀಗೆ ನೀವು ಪ್ರತಿದಿನ ಮಾಡಿದರೆ ನಿಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ಗಳು ಕರಗುವುದಲ್ಲದೇ ಹೃದಯದ ಸಮಸ್ಯೆಯಿಂದ ದೂರವಿರಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ