ಪುಣೆ ನಾಯಕನ ಸ್ಥಾನದಿಂದ ಧೋನಿಯನ್ನ ಕೆಳಗಿಳಿಸಿದ್ದಕ್ಕೆ ಅಜರುದ್ದೀನ್ ಆಕ್ರೋಶ

ಮಂಗಳವಾರ, 21 ಫೆಬ್ರವರಿ 2017 (09:35 IST)
ಪುಣೆ ತಂಡದ ನಾಯಕನ ಸ್ಥಾನದಿಂದ ಮಹೇಂದ್ರ ಸಿಂಗ್ ಧೋನಿಯನ್ನ ಕೆಳಗಿಳಿಸಿದ ಬಗ್ಗೆ ಟೀಮ್ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಧೋನಿಯನ್ನ ಕೆಳಗಿಳಿಸುವ ನಿರ್ಧಾರ ಅತ್ಯಂತ ಕೆಳಮಟ್ಟದ್ದು ಎಂದು ಕಿಡಿ ಕಾರಿದ್ದಾರೆ.


ಧೋನಿ ಕೆಳಗಿಳಿಸಿದ್ದು ಮತ್ತು ಕೆಳಗಿಳಿಸಿದ ರೀತಿ ಅತ್ಯಂತ ಕೀಳುದರ್ಜೆಯದ್ದು, ಧೊನಿ ಭಾರತೀಯ ಕ್ರಿಕೆಟ್`ನ ಜುವೆಲ್ಲರಿ ಇದ್ದಂತೆ, 8-9 ವರ್ಷಗಳಲ್ಲಿ ಧೋನಿ ಎಲ್ಲ ಮಾದರಿಯ ಸರಣಿಗಳನ್ನ ಗೆದ್ದಿದ್ದಾರೆ. ಮಾಲೀಕರು ನನ್ನ ಹಣದಿಂದ ನನ್ನ ತಂಡ ನಡೆಸುತ್ತೇನೆಂದು ಹೇಳಬಹುದು. ಆದರೆ, ಈ ನಿರ್ಧಾರಕ್ಕೂ ಮುನ್ನ ಧೋನಿಯ ಘನತೆ ಮತ್ತು ವಿಶ್ವಾಸಾರ್ಹತೆ ಬಗ್ಗೆ ಗಮನಹರಿಸಿದ್ದಾರಾ..? ಹಾಗೇನಾದರೂ ಗಮನ ಹರಿಸಿದ್ದರೆ ಈ ನಿರ್ಧಾರ ಕೈಗೊಳ್ಳುತ್ತಿರಲಿಲ್ಲ ಎಂದು ಅಜರುದ್ದೀನ್ ಹೇಳಿದ್ದಾರೆ.
 
ಮೊನ್ನೆಯಷ್ಟೇ, ಪುಣೆ ತಂಡಕ್ಕೆ ಯುವ ನಾಯಕನ ಅಗತ್ಯವಿದೆ ಎಂದು ಹೇಳಿದ್ದ ಮಾಲೀಕ ಸಜೀವ್ ಗೋಯೆಂಕಾ ಧೋನಿಯನ್ನ ನಾಯಕನ ಸ್ಥಾನದಿಂದ ಕೆಳಗಿಳಿಸಿದ್ದ ನಿರ್ಧಾರ ಪ್ರಕಟಿಸಿದ್ದರು.
 

ವೆಬ್ದುನಿಯಾವನ್ನು ಓದಿ