ದುಬೈಗೆ ತೆರಳಲು ಧೋನಿ ಪಡೆಗೆ ಎದುರಾಗಿದೆ ಹೊಸ ಸಂಕಷ್ಟ

ಬುಧವಾರ, 11 ಆಗಸ್ಟ್ 2021 (10:24 IST)
ಚೆನ್ನೈ: ಐಪಿಎಲ್ 14 ರ ಉಳಿದ ಪಂದ್ಯಗಳಲ್ಲಿ ಭಾಗಿಯಾಗಲು ದುಬೈಗೆ ತೆರಳಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆರಂಭದಲ್ಲೇ ಸಂಕಷ್ಟ ಎದುರಾಗಿದೆ.


ಐಪಿಎಲ್ ಗೆ ತಯಾರಿ ನಡೆಸಲು ಧೋನಿ ಪಡೆ ಮೊದಲೇ ದುಬೈ ರಾಷ್ಟ್ರಕ್ಕೆ ತೆರಳುವ ಯೋಜನೆ ಹಾಕಿಕೊಂಡಿತ್ತು. ಆಗಸ್ಟ್ 13 ರಂದು ತೆರಳಲು ತಯಾರಿ ನಡೆಸಿತ್ತು. ಆದರೆ ಈಗ ಪ್ರಯಾಣ ನಿರ್ಬಂಧವಿರುವುದರಿಂದ ಇನ್ನೂ ಧೋನಿ ಪಡೆಗೆ ಅನುಮತಿ ಸಿಕ್ಕಿಲ್ಲ.

ಹೀಗಾಗಿ ಈಗ ಬಿಸಿಸಿಐ ಯುಎಇಗೆ ತೆರಳಲು ಬೇಕಾದ ಅನುಮತಿ ಪಡೆಯಲು ಪ್ರಯತ್ನ ನಡೆಸಿದೆ. ಧೋನಿ ಈಗಾಗಲೇ ಚೆನ್ನೈಗೆ ಬಂದಿಳಿದಿದ್ದು, ಅವರ ಜೊತೆ ಅಂತಾರಾಷ್ಟ್ರೀಯ ಕ್ರಿಕೆಟ್ ನ ಭಾಗವಾಗದ ಕ್ರಿಕೆಟಿಗರು ಸೇರಿಕೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ