ಜೈಲಿಗೆ ಬಂದ ಆಪ್ತರ ಬಳಿ ಈ ವಿಚಾರಕ್ಕೆ ಕಣ್ಣೀರು ಹಾಕಿದ ದರ್ಶನ್

Krishnaveni K

ಶುಕ್ರವಾರ, 12 ಜುಲೈ 2024 (10:47 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಈಗ ತಮ್ಮನ್ನು ಭೇಟಿಯಾಗಲು ಬಂದ ಆಪ್ತರ ಬಳಿ ಕಣ್ಣೀರು ಹಾಕಿದ್ದಾರೆ ಎನ್ನಲಾಗುತ್ತಿದೆ.

ಇತ್ತೀಚೆಗೆ ನಟ ದರ್ಶನ್ ರನ್ನು ಅವರ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್, ಅಕ್ಕನ ಮಗ, ನಟ ಧನ್ವೀರ್ ಮುಂತಾದವರು ಭೇಟಿಯಾಗಿದ್ದರು. ಹಾಯಾಗಿ ಓಡಾಡಿಕೊಂಡಿದ್ದ ದರ್ಶನ್ ಗೆ ಈಗ ಜೈಲು ಕಟ್ಟಿಹಾಕಿದ ಅನುಭವವಾಗುತ್ತಿದೆ. ತಮ್ಮ ಇಷ್ಟದ ಆಹಾರ, ನೀರು ಇಲ್ಲದೇ ದರ್ಶನ್ ಹೈರಾಣಾಗಿದ್ದಾರೆ.

ಅಲ್ಲದೆ, ದರ್ಶನ್ ಪ್ರತಿನಿತ್ಯ ವರ್ಕೌಟ್ ಮಾಡಿ ದೇಹ ಹುರಿಗೊಳಿಸುವ ವಿಚಾರದಲ್ಲಿ ಕಟ್ಟುನಿಟ್ಟಾಗಿದ್ದರು. ಆದರೆ ಜೈಲು ಸೇರಿದಾಗಿನಿಂದ ವರ್ಕೌಟ್ ಗೆ ಕತ್ತರಿ ಬಿದ್ದಿದೆ. ಒಂದೇ ಸೆಲ್ ನಲ್ಲಿ ಕೂತು ಕೈ ಕಾಲು ಜೋಮು ಹಿಡಿದಿದೆ. ಜೈಲೂಟ ಸೇರದೇ ಅಜೀರ್ಣವಾಗುತ್ತಿದೆ.

ಇದರಿಂದಾಗಿ ತೂಕ ಕಳೆದುಕೊಳ್ಳುತ್ತಿದ್ದಾರೆ. ಒಬ್ಬ ಕಲಾವಿದನಿಗೆ ಮುಖ್ಯವಾಗಿ ಆತನ ದೇಹ ಸೌಂದರ್ಯ ಕೂಡಾ ಮುಖ್ಯವಾಗುತ್ತದೆ. ಆದರೆ ವರ್ಕೌಟ್ ಮಾಡದೇ, ಸೂಕ್ತ ಆಹಾರವಿಲ್ಲದೇ ತಾವು ಕಷ್ಟಪಟ್ಟು ಗಳಿಸಿದ್ದ ಮೈಮಾಟ ಉಳಿಸಿಕೊಳ್ಳಲಾಗುತ್ತಿಲ್ಲ ಎಂದು ದರ್ಶನ್ ಗೆ ಚಿಂತೆ ಕಾಡಿದೆಯಂತೆ. ಇದೇ ವಿಚಾರಕ್ಕೆ ತಮ್ಮನ್ನು ಭೇಟಿ ಮಾಡಲು ಬಂದ ಆಪ್ತರ ಬಳಿ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ