ಕೈದಿ ನಂಬರ್ ಬೆನ್ನಲ್ಲೇ ದರ್ಶನ್ ಟೀ ಶರ್ಟ್‌ ಟ್ರೆಂಡ್‌

Sampriya

ಭಾನುವಾರ, 1 ಸೆಪ್ಟಂಬರ್ 2024 (18:40 IST)
Photo Courtesy X
ಬೆಂಗಳೂರು:  ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ರೂ ಅವರ ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ನಟನನ್ನು ಆರಾಧಿಸುವುದನ್ನು ಬಿಡುತ್ತಿಲ್ಲ.

ಬಳ್ಳಾರಿ ಜೈಲಿಗೆ ಎಂಟ್ರಿ ಕೊಡುವಾಗ ದರ್ಶನ್ ಅವರು ಬ್ರ್ಯಾಂಡೆಟ್ ಟೀ ಶರ್ಟ್ ಮತ್ತು ಕೂಲಿಂಗ್ ಗ್ಲಾಸ್‌ ಧರಿಸಿದ್ದರು. ಅದಲ್ಲದೆ ಪತ್ನಿ ವಿಜಯಲಕ್ಷ್ಮೀ ಭೇಟಿ ವೇಳೆಯೂ ಅದೇ ಟೀ ಶರ್ಟ್ ಧರಿಸಿದ್ದರು. ಇದೀಗ ಅದೇ ಮಾದರಿಯ ಟೀ ಶರ್ಟ್ ಧರಿಸಿ ಅಭಿಮಾನಿಗಳು ಫೋಟೋಶೂಟ್ ಮಾಡಿ, ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಬೆಂಬಲ ಸೂಚಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಆರಂಭದಲ್ಲಿ ದರ್ಶನ್ ಅವರಿಗೆ ನೀಡಿದ್ದ ಕೈದಿ ನಂಬರ್‌ ಅನ್ನು ತಮ್ಮ ವಾಹನಗಳಿಗೆ ಹಾಕಿ ಅಭಿಮಾನ ಪ್ರದರ್ಶಿಸಿದ್ದರು. ಇದೀಗ ಬಳ್ಳಾರಿ ಜೈಲಿನಲ್ಲಿ ನೀಡಿದ ಕೈದಿ ನಂಬರ್‌ ಅನ್ನು ವಾಹನಗಳಿಗೆ ಹಾಕಿದ್ದಾರೆ. ಅದಲ್ಲದೆ ಟೀ ಶರ್ಟ್ ಟ್ರೆಂಡ್ ಶುರು ಮಾಡಿದ್ದಾರೆ.

ಈಚೆಗೆ ದರ್ಶನ್ ಅವರ ಕರಿಯ ರಿ ರಿಲೀಸ್ ಆಗಿ ಭಾರೀ ದೊಡ್ಡ ಸದ್ದು ಮಾಡಿತ್ತು, ಅವರ ಅಭಿಮಾನಿಗಳು ಥಿಯೇಟರ್ ಮುಂದೆ ತಮ್ಮ ನೆಚ್ಚಿನ ಹೀರೋನ ಕಟೌಟ್ ನೋಡಿ ಕುಣಿದು ಕುಪ್ಪಳಿಸಿದರು.  ಇನ್ನೂ ಬೆಳ್ಳಿ ಪರದೆ ಮೇಲೆ ದರ್ಶನ್ ಅವರು ಎಂಟ್ರಿ ಕೊಡುತ್ತಿದ್ದ ಹಾಗೇ ಸಿಳ್ಳೆ ಹೊಡೆದು ಕರಿಯನನ್ನು ಸ್ವಾಗತಿಸಿದರು. ದರ್ಶನ್ ಅವರು ಜೈಲಿನಿಂದ ಹೊರ ಬಂದೇ ಬರುತ್ತಾರೆ ಎಂದು ಬೆಂಬಲ ಸೂಚಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ