ಯಶ್ ಜೊತೆಗಿನ ಸಿನಿಮಾ ಕೈ ಬಿಡಲು ಕಾರಣ ತಿಳಿಸಿದ ನರ್ತನ್

ಶುಕ್ರವಾರ, 26 ಮೇ 2023 (16:29 IST)
Photo Courtesy: Twitter
ಬೆಂಗಳೂರು: ಕೆಜಿಎಫ್ 2 ಬಳಿಕ ರಾಕಿಂಗ್ ಸ್ಟಾರ್ ಯಶ್‍ ನಿರ್ದೇಶಕ ನರ್ತನ್ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ನರ್ತನ್ ಸಿನಿಮಾದಲ್ಲಿ ಯಶ್ ನಟಿಸುತ್ತಿಲ್ಲ ಎನ್ನುವುದು ಈಗ ಓಪನ್ ಸೀಕ್ರೆಟ್ ಆಗಿದೆ. ಇದಕ್ಕೆ ಕಾರಣವೇನೆಂದು ಈಗ ನರ್ತನ್ ಹೇಳಿದ್ದಾರೆ.

ಶಿವರಾಜ್ ಕುಮಾರ್ ನಾಯಕರಾಗಿರುವ ನರ್ತನ್ ನಿರ್ದೇಶನದ ಭೈರತಿ ರಣಗಲ್ ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ಅವರು ಯಶ್ ಜೊತೆಗಿನ ಸಿನಿಮಾ ಕೈ ಬಿಡಲು ಕಾರಣವೇನೆಂದು ತಿಳಿಸಿದ್ದಾರೆ. ಆದರೆ ಯಶ್ ಟಚ್ ನಲ್ಲಿದ್ದಾರೆ. ಮುಂದೊಂದು ದಿನ ಸಿನಿಮಾ ಮಾಡೇ ಮಾಡ್ತೀವಿ ಎಂದಿದ್ದಾರೆ.

‘ನಾನು ಮಾಡಿದ ಕತೆ ಬೇರೊಂದು ಸಿನಿಮಾ ಕತೆಯನ್ನು ಹೋಲುತ್ತಿದ್ದರಿಂದ ಯಶ್ ಈ ಸಿನಿಮಾ ಮಾಡುವುದು ಬೇಡ ಎಂದರು. ಅದಕ್ಕೇ ಸಿನಿಮಾ ಮಾಡಲಿಲ್ಲವಷ್ಟೇ. ಅವರಿಗಾಗಿ ದೊಡ್ಡ ಕತೆಯೊಂದನ್ನು ಬರೆದಿದ್ದೆ. ಸದ್ಯಕ್ಕೆ ಅದು ಡ್ರಾಪ್ ಆಗಿದೆ. ಮುಂದೆ ಜೊತೆಯಾಗಿ ಸಿನಿಮಾ ಮಾಡೇ ಮಾಡ್ತೀವಿ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ