ಅಂಬರೀಶ್ ಅಂತ್ಯಸಂಸ್ಕಾರದ ವಿಧಿವಿಧಾನಕ್ಕೆ ಸಿದ್ಧತೆ ಹೀಗಿದೆ ನೋಡಿ

ಸೋಮವಾರ, 26 ನವೆಂಬರ್ 2018 (14:03 IST)
ಬೆಂಗಳೂರು : ಈಗಾಗಲೇ ನಟ ಅಂಬರೀಶ್ ಅವರ  ಅಂತಿಮಯಾತ್ರೆ ಆರಂಭವಾಗಿದ್ದು, ಇತ್ತ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅಂತ್ಯಸಂಸ್ಕಾರದ ವಿಧಿವಿಧಾನಕ್ಕೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ.


ಅಂಬರೀಶ್ ಅವರ ಪಾರ್ಥಿವ ಶರೀರದ ಅಗ್ನಿ ಸ್ಪರ್ಶಕ್ಕೆ ಸುಮಾರು 7 ರೀತಿಯ ಸೌದೆ ಬಳಕೆ ಮಾಡಲಾಗುವುದು. ಬೆರಣಿ ತುಪ್ಪ, ಬೆಣ್ಣೆ ಧೂಪ, ಗಂಧದ ಕಡ್ಡಿ ಬಳಕೆ ಮಾಡಲಾಗುತ್ತಿದೆ.


10 ಅಡಿ ಉದ್ದ ಹಾಗೂ 8 ಅಡಿ ಅಗಲವಾದ ಕಟ್ಟೆ ನಿರ್ಮಾಣ ಮಾಡಲಾಗಿದೆ. ಮದ್ದೂರು ಮೂಲದ ಹುಚ್ಚಯ್ಯ ಕೋಣಪ್ಪರಿಂದ ಅಂತಿಮ ವಿಧಿವಿಧಾನಗಳು ನಡೆಯಲಿವೆ. ಅಗ್ನಿ ಸ್ಪರ್ಶಕ್ಕಾಗಿ 500 ಕೆಜಿ 300 ತುಂಡು ಗಂಧದ ಮರಗಳ ಬಳಕೆಮಾಡಲಾಗುವುದು.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ