ಎರಡು ನರಿಗಳು ದೂರವಿದ್ದಷ್ಟು ಒಳ್ಳೆಯದು! ಶಿವಣ್ಣ-ಪ್ರಭುದೇವ ಸಿನಿಮಾದ ಹೊಸ ಪೋಸ್ಟರ್

ಶುಕ್ರವಾರ, 14 ಜುಲೈ 2023 (16:14 IST)
Photo Courtesy: Twitter
ಬೆಂಗಳೂರು: ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಒಟ್ಟಾಗಿ ನಟಿಸುತ್ತಿರುವ ಕರಟಕ ದಮನಕ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ.

ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ಈ ಸಿನಿಮಾದ ವಿಶಿಷ್ಟ ಪೋಸ್ಟರ್ ಬಿಡುಗಡೆಯಾಗಿದ್ದು, ಪೋಸ್ಟರ್ ನಲ್ಲಿ ಶಿವಣ್ಣ ಮತ್ತು ಪ್ರಭುದೇವ ಇಬ್ಬರೂ ಜೊತೆಯಾಗಿದ್ದಾರೆ. ಆದರೆ ‘ಎರಡೂ ನರಿಗಳು ದೂರವಿದ್ದಷ್ಟು ಹುಷಾರಾಗಿರ್ತೀರ’ ಎನ್ನುವ ಅಡಿಬರಹ ಎಲ್ಲರ ಗಮನ ಸೆಳೆಯುತ್ತಿದೆ.

ಈ ಸಿನಿಮಾದ ಟೈಟಲ್ಲೇ ವಿಶಿಷ್ಟವಾಗಿದೆ. ಅದರ ಜೊತೆಗೆ ಯೋಗರಾಜ್ ಭಟ್ ನಿರ್ದೇಶನ ಎಂದರೆ ಇಂತಹ ಕ್ರಿಯೇಟಿವಿಟಿ ಇರಲೇಬೇಕು. ಚಿತ್ರಕ್ಕೆ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ