ಮಂಡ್ಯಕ್ಕೆ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರ್ ಕೊವಿಡ್ ನೆರವು

ಬುಧವಾರ, 12 ಮೇ 2021 (10:40 IST)
ಬೆಂಗಳೂರು: ಕೆಜಿಎಫ್ ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರ್ ಮಂಡ್ಯ ಜಿಲ್ಲೆಯ ಕೊರೋನಾ ಪೀಡಿತರಿಗೆ ನೆರವಾಗಲು ಮುಂದೆ ಬಂದಿದ್ದಾರೆ.


ಮಂಡ್ಯಕ್ಕೆ ಐಸಿಯು ಬೆಡ್ ಗಳ ಆಸ್ಪತ್ರೆ ಅಥವಾ ಎರಡು ಆಕ್ಸಿಜನ್ ಘಟಕ ನಿರ್ಮಿಸಿಕೊಡಲು ಸಿದ್ಧ ಎಂದು ಜಿಲ್ಲಾಧಿಕಾರಿಗಳಿಗೆ ಹೇಳಿದ್ದಾರೆ. ಇದಕ್ಕೆ ಅವರು ಯಾವ ರೀತಿ ಸ್ಪಂದಿಸುತ್ತಾರೆ ನೋಡಬೇಕು.

ಕೆಜಿಎಫ್, ರಾಜಕುಮಾರ ಮುಂತಾದ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್ ಮಾಲಿಕರಾಗಿರುವ ವಿಜಯ್ ಕಿರಗಂದೂರ್ ಈ ಮೂಲಕ ತಮ್ಮ ತವರಿಗೆ ಭರ್ಜರಿ ಕೊಡುಗೆ ನೀಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ