ಸಂತ್ರಸ್ಥರಿಗಾಗಿ ಆಹಾರ ಪದಾರ್ಥ ಸಂಗ್ರಹಿಸಿದ ವಿಶಿಷ್ಟ ಚೇತನ!

ಭಾನುವಾರ, 19 ಆಗಸ್ಟ್ 2018 (14:18 IST)
ಕೊಡಗು ಮತ್ತು ಮಡಿಕೇರಿ ಸಂತ್ರಸ್ತರಿಗೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜನತೆ ನೆರವಾಗಿದ್ದಾರೆ.

ಬಿಸ್ಕಟ್, ಬ್ರೆಡ್ ಸೇರಿದಂತೆ ಆಹಾರ ಪದಾರ್ಥವನ್ನು ವಿಕಲ ಚೇತನ ವ್ಯಕ್ತಿಯೊಬ್ಬರು ಜನರಿಂದ ಸಂಗ್ರಹಿಸಿದ್ದಾರೆ. ಅಥಣಿ ತಹಶಿಲ್ದಾರರ ಮೂಲಕ ಕೊಡಗು ಮತ್ತು ಮಡಿಕೇರಿಯ ಪ್ರವಾಹ  ಸಂತ್ರಸ್ತರಿಗೆ ರವಾನಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಅಥಣಿ ತಾಲೂಕಿನ ಐನಾಪೂರದ ನಿವಾಸಿ ರಮೇಶ್ ನಾಯಕ ಎಂಬ ವಿಶಿಷ್ಟ ಚೇತನ ಸದ್ಯ ಮಾನವೀಯತೆ ಮೆರೆದಿದ್ದಾನೆ. ನಾಲ್ಕು ಬಾಕ್ಸನಷ್ಟು ಆಹಾರ ಪದಾರ್ಥಗಳನ್ನು ಜನರಿಂದ ಸಂಗ್ರಹಿಸಿ ತಹಶಿಲ್ದಾರ ಕಚೇರಿ ಮೂಲಕ ಸಂತ್ರಸ್ಥರಿಗೆ ತಲುಪಿಸಲು ಮುಂದಾಗಿದ್ದು ಸಹಾಯದ ಹಸ್ತ ಚಾಚಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ