ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

ಸೋಮವಾರ, 6 ಫೆಬ್ರವರಿ 2023 (13:40 IST)
ನಗರದ ಮೈಸೂರು ಬ್ಯಾಂಕ್ ಸರ್ಕಲ್ ಮುಂಭಾಗ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಅಕ್ರೋಶ ಹೊರಹಾಕ್ತಿದ್ದಾರೆ.
 
ಎಲ್ ಐ ಸಿ ,ಸ್ಟೇಟ್ ಬ್ಯಾಂಕ್ ಇಂಡಿಯಾ ಈ ಎರಡು ಸಂಸ್ಥೆ ಗಳ ಮುಂದೆ ಪ್ರತಿಭಟನೆ ಮಾಡಲು ನಮಗೆ ಆದೇಶ ಬಂದಿತ್ತು.ಅದಕ್ಕೆ ಎಲ್ಲೇಲ್ಲಿ ಎಲ್ ಐ ಸಿ ಸ್ಟೇಟ್ ಬ್ಯಾಂಕ್ ಇದಾವೆ ಅಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ .ಎಲ್ ಐ ಸಿ ಅವರು ಅದಾನಿ ಗ್ರೂಪ್ ನಲ್ಲಿ 36 ಸಾವಿರ ಕೋಟಿ ಹೂಡಿಕೆ ಮಾಡಿದ್ದಾರೆ.ಇವೇರಡು ಸಂಸ್ಥೆಯಲ್ಲಿರುವ ಹಣ ಯಾರದು ಸಾರ್ವಜನಿಕರದ್ದು.ಹಿಡೆನ್ ಬರ್ಗ್ ವರದಿ ಪ್ರಕಾರ ಎಲ್ ಐ ಸಿ ಸಂಸ್ಥೆಗೆ 18 ಸಾವಿರ  ಕೋಟಿ ನಷ್ಟ ಆಗಿದೆ.೨೦೧೪ ರಿಂದ ಇಚಿಗೆ ೧೦ ಲಕ್ಷ ಕೋಟಿ 25 ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ.ಅದಾನಿಗೆ  ೧೦ ಲಕ್ಷ ಕೋಟಿ ನಷ್ಟ ಆಗಿದೆ ಅದು ಯಾರ ದುಡ್ಡು ಎಲ್ ಐ ಸಿ , ಸ್ಟೇಟ್ ಬ್ಯಾಂಕ್ ಹಣ ಇದರ ವಿರುದ್ದ ಪ್ರತಿಭಟನೆ ಮಾಡುತ್ತಿದ್ದೇವೆ .ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿ ಗಳ ನೇತೃತ್ವದಲ್ಲಿ ತನಿಖೆ ಆಗಬೇಕು.ಸಾರ್ವಜನಿಕರ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಧರಣಿ ನಡೆಸುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ