ಓಎಲ್ ಎಕ್ಸ್ ಜಾಹೀರಾತು ನೋಡಿ ವಾಹನಗಳನ್ನು ಖರೀದಿಸುವ ಗ್ರಾಹಕರೇ ಹುಷಾರ್

ಶನಿವಾರ, 30 ಡಿಸೆಂಬರ್ 2017 (11:41 IST)
ಬೆಂಗಳೂರು: ಓಎಲ್ ಎಕ್ಸ್  ಜಾಹೀರಾತು ನೋಡಿ ವಾಹನಗಳನ್ನು, ವಸ್ತುಗಳನ್ನು  ಖರೀದಿಸುವ ಹಾಗು ಮಾರಾಟ ಮಾಡುವ ಗ್ರಾಹಕರಿಗೊಂದು ಎಚ್ಚರಿಕೆ. ಓಎಲ್ ಎಕ್ಸ್  ಜಾಹೀರಾತು ನೋಡಿ ವಾಹನಗಳನ್ನು ಖರೀದಿಸುವ ನೆಪದಲ್ಲಿ ನಾಮ ಹಾಕುವ ಕಳ್ಳರಿದ್ದಾರೆ ಹುಷಾರ್.


ಮಾಲೀಕರನ್ನು ನಂಬಿಸಿ ಬೈಕ್ ,ಮೊಬೈಲ್ ಎಗರಿಸುವ ಖತರ್ನಾಕ್ ಖದೀಮನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹಾಸನ ಮೂಲದ ಪುನೀತ್ ಕುಮಾರ್ ಬಂಧಿಸಲ್ಪಟ್ಟ ಆರೋಪಿ. ಇತನನ್ನು ಕಬ್ಬನ್ ಪಾರ್ಕ್  ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತನ ಬಳಿಯಿದ್ದ 3 ಲಕ್ಷ ಮೌಲ್ಯದ 5 ದ್ವಿಚಕ್ರ ವಾಹನ ಹಾಗು 3 ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಇತ 8 ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ