ನೀರಿನಿಂದ ಮಗನ ಶವ ಹೊರತೆಗೆದ ಅಪ್ಪ

ಸೋಮವಾರ, 12 ಆಗಸ್ಟ್ 2019 (16:28 IST)
ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಮಗನ ಶವವನ್ನು ಅಪ್ಪನೇ ಹೊರತೆಗೆದು ಹೊತ್ತುಕೊಂಡ ಬಂದ ಘಟನೆ ನಡೆದಿದೆ.

ಗಡಿ ಜಿಲ್ಲೆಯಾಗಿರೋ ಬೆಳಗಾವಿಯ ಬೆವಳಡಿ ಎಂಬ ಹಳ್ಳಿಯಲ್ಲಿ ಈ ಕರುಳು ಹಿಂಡುವ ಘಟನೆ ನಡೆದಿದೆ.

ಎರಡು ವಾರಗಳ ಹಿಂದೆ ಬೆಳವಡಿ ಹೊರವಲಯದಲ್ಲಿ ಮೇವು ತರೋಕೆ ಅಂತ ಸಂಗಮೇಶ್ (21) ಹೋಗಿದ್ದನು. ಈ ವೇಳೆ ಹಳ್ಳ ತುಂಬಿ ಹರಿಯುತ್ತಿತ್ತು. ಹಳ್ಳ ದಾಟುವಾಗ ಆತ ನೀರುಪಾಲಾಗಿದ್ದನು.

ನಾಪತ್ತೆ ದೂರು ಕೊಡೋಕೆ ಅಂತ ಹೋದಾಗ ದೂರುದಾರರನ್ನೇ ವಾಪಸ್ ಕಳಿಸಿದ್ದರು ಪೊಲೀಸರು ಎನ್ನಲಾಗಿದೆ.
ಇವತ್ತು ಹಳ್ಳದಲ್ಲಿ ಮೃತ ಸಂಗಮೇಶ ಧರಿಸಿದ ಬಟ್ಟೆಯನ್ನು ಗಮನಿಸಿದ ತಂದೆ ಆತನನ್ನು ಗುರುತಿಸಿ ಮಗನ ಶವ ಹೊರತೆಗೆದಿದ್ದಾನೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ