ಮಹಿಳೆಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಜಿ.ಪರಮೇಶ್ವರ್‌

ಶುಕ್ರವಾರ, 26 ಜನವರಿ 2018 (19:40 IST)
ಮೂತ್ರಪಿಂಡ ವೈಫಲ್ಯದಿಂದ ತೊಂದರೆ ಅನುಭವಿಸುತ್ತಿರುವ ಮಹಿಳೆಯೊಬ್ಬರಿಗೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಅವರು ಆರ್ಥಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೊಳ್ಳೆಗಾಲ ಮೂಲದ ರಾಜಿಬಾಯಿ ಅವರು ಕೊರಟಗೆರೆ ತಾಲ್ಲೂಕಿನ ಪೆಮ್ಮದೇವರಹಳ್ಳಿ ಗ್ರಾಮದಲ್ಲಿ ಬಂಡೆ ಕೆಲಸ ಮಾಡುತ್ತಿದ್ದು, ಮೂತ್ರಪಿಂಡ ವೈಫಲ್ಯದಿಂದ ತೊಂದರೆಗೆ ಸಿಲುಕಿದ್ದಾರೆ.
 
ರಾಜಿಬಾಯಿ ಅವರ ತಾಯಿ ಮೂತ್ರಪಿಂಡ ನೀಡಲು ಮುಂದಾಗಿರುವ ವಿಷಯ ತಿಳಿದ ಜಿ.ಪರಮೇಶ್ವರ್ ಅವರು ಒಂದು ಲಕ್ಷ ರೂಪಾಯಿ ನೆರವು ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ