ಶಿರೂರು ಮಠದ ಶ್ರೀಗಳ ಅಗಲಿಕೆಗೆ ಒಂದು ವರ್ಷ

ಶನಿವಾರ, 20 ಜುಲೈ 2019 (14:43 IST)
ಉಡುಪಿ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅಹಜ ಸಾವನ್ನಪ್ಪಿ ಒಂದು ವರುಷ ಕಳೆದಿದೆ.

ಶಿರೂರು ಸ್ವಾಮೀಜಿ ಅಭಿಮಾನಿಗಳು ಶಿರೂರು ಸ್ವಾಮೀಜಿ ಸಂಸ್ಮರಣೆ ಕಾರ್ಯಕ್ರಮವನ್ನು ಉಪ್ಪೂರಿನಲ್ಲಿರುವ ಸ್ಪಂದನ ವಿಶೇಷ ಮಕ್ಕಳ ಶಾಲೆಯಲ್ಲಿ ಆಯೋಜಿಸಿದ್ರು.

ಕೇಮಾರು  ಸಾಂದೀಪಿನಿ ಮಠದ ಶ್ರೀ ಈಶ ವಿಠಲ ಶ್ರೀಪಾದರು ಶಿರೂರು ಸ್ವಾಮೀಜಿಗಳ ಭಾವ ಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸಿದ್ರು.

ಈ ಸಂದರ್ಭದಲ್ಲಿ ವಿಶೇಷ ಶಾಲೆಯ ವಿದ್ಯಾರ್ಥಿಗಳಿಗೆ ಟೀ ಶರ್ಟ, ಪುಸ್ತಕ ಹಾಗೂ ಬಿಸ್ಕಿಟ್ ಗಲನ್ನು ಹಂಚಿ, ಮಕ್ಕಳಿಗೆ ಅನ್ನಸಂತರ್ಪಣೆಯನ್ನು ಮಾಡಲಾಯಿತು.

ಖ್ಯಾತ ವಕೀಲ ರವಿಕಿರಣ್ ಮುರ್ಡೇಶ್ವರ್, ಉದ್ಯಮಿ ಮನೋಹರ್ ಶೆಟ್ಟಿ, ಇಂದ್ರಾಳಿ ಜಯಕರ್ ಶೆಟ್ಟಿ, ಲಾತ್ವ್ಯ ಅಚಾರ್, ಶಿರೂರು ಅಭಿಮಾನಿ ಸಮಿತಿಯ ನವೀನ್ ರಾವ್, ರಾಧಕೃಷ್ಣ ಶೆಟ್ಟಿ ಉಪಸ್ಥಿತರಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ