ತಬ್ಲಿಘಿಗಳಲ್ಲಿ ಮತ್ತೊಮ್ಮೆ ಕೊರೊನಾ ಪರೀಕ್ಷೆ ಮಾಡ್ತೇವೆ ಎಂದ ಸಚಿವ

ಸೋಮವಾರ, 13 ಏಪ್ರಿಲ್ 2020 (16:00 IST)
ದೆಹಲಿಯ ತಬ್ಲಿಘಿ ಜಮಾತ್ ಹೋಗಿ ಬಂದವರಿಗೆ ಈಗಾಗಲೇ ಕೊರೊನಾ ವೈರಸ್ ಪರೀಕ್ಷೆ ಮಾಡಿಸಲಾಗಿದೆ. ಆದರೂ ಇನ್ನೊಮ್ಮೆ ಪರೀಕ್ಷೆ ನಡೆಯುತ್ತದೆ ಎಂದು ಸಚಿವರೊಬ್ಬರು ಹೇಳಿದ್ದಾರೆ.

ಈ ತಿಂಗಳ 16 ಅಥವಾ 17 ರಂದು ದೆಹಲಿಯ ತಬ್ಲಿಘಿಗೆ ಹೋಗಿ ಬಂದ 79 ಜನರ ಎರಡನೇ ಟೆಸ್ಟ್ ‌ಮಾಡಲಿದ್ದು, ಅದರ ಫಲಿತಾಂಶದ ಮೇಲೆ ಬಳ್ಳಾರಿ ಜಿಲ್ಲೆ ಎಷ್ಟು ಸೇಫ್ ಎಂಬುದು ತಿಳಿಯಲಿದೆ. ಹೀಗಂತ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ ಹೇಳಿದ್ದಾರೆ.

ಕೊರೋನಾ ಸೋಂಕು ಹಿನ್ನಲೆಯಲ್ಲಿ ಜನರ ಸಂಕಷ್ಟ ಎದುರಿಸಲು ಜಿಲ್ಲಾಡಳಿತ ಸಕಲ CX ರೀತಿಯಲ್ಲಿ ವ್ಯವಸ್ಥೆ ಮಾಡಿಕೊಂಡಿದೆ. ಬಡಜನತೆಗೆ  ಪಡಿತರ ಹಂಚುವಲ್ಲಿ ಶೇ. 89 ರಷ್ಟು ಮಾಡಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಜಿಲ್ಲಾ ಉಸ್ತುಚಾರಿ ಸಚಿವ ಆನಂದ್‌ ಸಿಂಗ್ ಹೇಳಿದ್ದಾರೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ