ಮಾಹಾಮಾರಿ ಕೊರೊನಾ ಹಾವಳಿಯಿಂದ ಇಂದು ಕೋವೀಡ್ ಲಸಿಕೆ ಅಭಿಯಾನ

ಶನಿವಾರ, 18 ಸೆಪ್ಟಂಬರ್ 2021 (21:51 IST)
ಮಾಹಾಮಾರಿ ಕೊರೊನಾ ಹಾವಳಿಯಿಂದ ಇಂದು ಕೋವೀಡ್ ಲಸಿಕೆ ಅಭಿಯಾನ ಕುರಿತು ಆರೋಗ್ಯ ಸಚಿವರಾದ ಡಾ. ಸುಧಾಕರ  ಸುದ್ದಿಗೋಷ್ಟಿಯಲ್ಲಿ  ಮಾತನಾಡಿ  ಈಗಾಗಲೇ ೪ ಜಿಲ್ಲೆಗಳಲ್ಲಿ ೭೦% ಟಾರ್ಗೆಟ್ ಕಡಿಮೆಯಾಗಿದೆ ಅದಕ್ಕಾಗಿ ಲಸಿಕೆ ಹಾಕುವ ಪ್ರಮಾಣವನ್ನೂ  ಕಡಿಮೆ ಮಾಡಲಾಗಿದೆ. ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಅಭಿಯಾನದ ಗುರಿಮುಟ್ಟಿದ್ದೇವೆ. ಇಡೀ ದೇಶದಲ್ಲಿ ಬಿಬಿಎಂಪಿ ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ ಬೆಳಗಾವಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ ಮೂರನೇ ಸ್ಥಾನ ಬಿಹಾರದ ಈಸ್ಟ್ ಚಂಪಾರಣ್ ಇದೆ. ೧೪.೩೭ ಲಕ್ಷ ಪುರುಷರು ಲಸಿಕೆ ಪಡೆದಿದ್ದಾರೆ ರಾಜ್ಯದಲ್ಲಿ ೫ ಕೋಟಿ ಲಸಿಕೆ ಗುರಿ ತಲುಪಿದ್ದೇವೆ. ಭಾರತದಲ್ಲಿ ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಅತಿ ಹೆಚ್ಚು ಲಸಿಕೆ ನೀಡಲಾಗಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ