ಜಮೀರ್ ಅಹ್ಮದ್ ಧರಣಿಗೂ ಮೊದಲೇ ನಡುಗಿದ್ರಾ ಗಣಿ ಧಣಿ ರೆಡ್ಡಿ?

ಭಾನುವಾರ, 12 ಜನವರಿ 2020 (21:10 IST)

ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜಮೀರ್ ಅಹ್ಮದ್ ಖಾನ್ ನಡೆಸಲಿರೋ ಧರಣಿಯಿಂದ ಬಳ್ಳಾರಿ ಗಣಿಧಣಿಗಳಲ್ಲಿ ನಡುಕ ಉಂಟಾಗಿದೆಯಾ?
 

ಇಂಥದ್ದೊಂದು ಚರ್ಚೆ ಇದೀಗ ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯ ರಾಜಕೀಯದಲ್ಲಿ ಹರಿದಾಡಲಾರಂಭಿಸಿದೆ.

ನಾನು ಯಾರಿಗೂ ಬೇಡಾ ಅಂತ ಹೇಳೋದಿಲ್ಲ. ಜಮೀರ್ ಅಹ್ಮದ್ ನಮ್ಮ ನಿವಾಸಕ್ಕೆ ಬರೋದಾದ್ರೆ ಬರಲಿ. ಹೀಗಂತ ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ಆಹ್ವಾನ ನೀಡಿದ್ದಾರೆ.

 

ಸಿಎಎ ಪರವಾದ ಸಮಾರಂಭದಲ್ಲಿ ದೇಶದ್ರೋಹಿಗಳ ವಿರುದ್ಧ ನಾನು ಮಾತನಾಡಿರುವೆ. ಅದಕ್ಕೆ ಜಮೀರ್ ಅಹ್ಮದ್ ನಮ್ಮ ಮನೆ ಮುಂದೆ ಧರಣಿ ನಡೆಸೋದಾದ್ರೆ ನಡೆಸಲಿ. ಜಮೀರ್ ಗೆ ಪ್ರಚಾರ ಬೇಕಾಗಿದೆ ಅಂತ ಶಾಸಕ ರೆಡ್ಡಿ ಹೇಳಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ