ಕೇರಳದಲ್ಲಿ ಬೋಟ್ ಮುಳುಗಿ 16 ಮಂದಿ ಸಾವು!

ಮಂಗಳವಾರ, 9 ಮೇ 2023 (12:01 IST)
ಕೇರಳ : ಕೇರಳದ ತನೂರ್ ತುವಾಲ್ ಬೀಚ್ನಲ್ಲಿ ಪ್ರವಾಸಿಗರಿದ್ದ  ದೋಣಿಯೊಂದು ಪಲ್ಟಿಯಾದ ಪರಿಣಾಮ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
 
ಮೃತರಲ್ಲಿ ಮಕ್ಕಳೂ  ಸೇರಿದ್ದಾರೆ. ಅಗ್ನಿಶಾಮಕ ದಳ, ಪೊಲೀಸರು, ಸ್ಥಳೀಯರು ಮತ್ತು ಮೀನುಗಾರರ ನೇತೃತ್ವದಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳುಗಳನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂತ್ರಸ್ತರು ಮಲಪ್ಪುರಂ ಜಿಲ್ಲೆಯ ವಿವಿಧ ಭಾಗದವರು ಎಂದು ತಿಳಿದುಬಂದಿದೆ. ಸಧ್ಯಕ್ಕೆ ಮೃತರ ವಿವರಗಳು ಲಭ್ಯವಿವಾಗಿಲ್ಲ. ಮೃತರಲ್ಲಿ ನಾಲ್ವರು ಮಕ್ಕಳಿದ್ದಾರೆಂದು ವರದಿಯಾಗಿದೆ. ಭಾನುವಾರ ಸಂಜೆ 6:30 ರಿಂದ 7 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ