ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ ಡಿಕೆ ಸುರೇಶ್. ಕಾರಣವೇನು ಗೊತ್ತಾ?

ಬುಧವಾರ, 25 ಸೆಪ್ಟಂಬರ್ 2019 (10:24 IST)
ನವದೆಹಲಿ: ಇಂದು ಡಿಕೆಶಿವಕುಮಾರ್ ಜಾಮೀನು ಅರ್ಜಿಯ ವಿಚಾರಣೆಯ ಹಿನ್ನಲೆ ಡಿಕೆ ಸುರೇಶ್ ಅವರು ಇಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರನ್ನು ಭೇಟಿ ಮಾಡಿದ್ದಾರೆ.




ಅಕ್ರಮ ಹಣ ಹೊಂದಿರುವ ಹಿನ್ನಲೆ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ಕೋರ್ಟ್ ನಲ್ಲಿ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಆದಕಾರಣ  ಇಂದು ದೇವೇಗೌಡರ ನಿವಾಸಕ್ಕೆ ಡಿಕೆ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ಅವರು ಭೇಟಿ ನೀಡಿದ್ದಾರೆ.


ದೆಹಲಿಯಲ್ಲಿರುವ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ ಡಿಕೆ ಸುರೇಸ್ ದೇವೆಗೌಡರ ಬಳಿ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಕಾನೂನು ಸಮರದ ಬಗ್ಗೆ ಹೆಚ್.ಡಿ.ಡಿ ಜೊತೆ ಡಿಕೆ ಸುರೇಶ್ ಚರ್ಚೆ ನಡೆಸಿದ್ದಾರೆ. ಅಲ್ಲದೇ ಈ ಹಿಂದೆ ಕೂಡ ಡಿಕೆಶಿವಕುಮಾರ್ ಅವರು ಕೂಡ ಕಾನೂನು ಸಲಹೆ ಪಡೆಯಲು ಹೆಚ್.ಡಿ.ಡಿ ಅವರನ್ನು ಭೇಟಿ ಮಾಡಿದ್ದರು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ