ಅತ್ತಿಗೆಯೊಂದಿಗೆ ಮದುವೆ- ಮನನೊಂದು ಬಾಲಕ ಆತ್ಮಹತ್ಯೆ

ಗುರುವಾರ, 14 ಡಿಸೆಂಬರ್ 2017 (13:39 IST)
ಹಿರಿಯರು ಮಾಡಿದ ಬಲವಂತದಿಂದ ಅತ್ತಿಗೆಯನ್ನು ಮದುವೆಯಾಗಿದ್ದ 15 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ.
 
ಬಿಹಾರ ರಾಜ್ಯದ ಗಯಾ ಜಿಲ್ಲೆಯ ವಿನೋಭಾ ನಗರದ ಮಹದೇವ್ ಕುಮಾರ್ ದಾಸ್ ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕ. 9ನೇ ತರಗತಿ ಓದುತ್ತಿದ್ದ ಬಾಲಕನಿಗೆ ತನಗಿಂತ 10 ವರ್ಷ ದೊಡ್ಡವರಾದ ಅತ್ತಿಗೆ ರೂಬಿ ದೇವಿಯೊಂದಿಗೆ ಮದುವೆ ಮಾಡಲಾಗಿತ್ತು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.
 
ಬಾಲಕನ ಅಣ್ಣ ಸಂತೋಷ್ ಕುಮಾರ್ ದಾಸ್, 2013ರಲ್ಲಿ ಎಲೆಕ್ಟ್ರಿಕ್ ಶಾಪ್ ನಲ್ಲಿ ಕೆಲಸ ಮಾಡುವಾಗ ವಿದ್ಯುತ್ ಅವಘಡದಲ್ಲಿ ಸಾವನ್ನಪ್ಪಿದ್ದರು. ಮಹದೇವ್ ತನ್ನ ಅತ್ತಿಗೆಯನ್ನು ತಾಯಿಯ ರೂಪದಲ್ಲಿ ಕಾಣುತ್ತಿದ್ದನು. ಆದರೂ ಮಹದೇವ್ ಪೋಷಕರು ಬಲವಂತವಾಗಿ ಮದುವೆ ಮಾಡಿಸಿದ್ದರು.
 
ಸಂತೋಷ್ ಕುಮಾರ್ ಸಾವನ್ನಪ್ಪಿದ ಬಳಿಕ 80 ಸಾವಿರ ರೂಪಾಯಿ ಪರಿಹಾರ ಹಣ ಬಂದಿತ್ತು. ಈ ಹಣಕ್ಕಾಗಿ ರೂಬಿದೇವಿ ಪೋಷಕರು ಹಾಗೂ ಪತಿಯ ಮನೆಯವರ ನಡುವೆ ಗಲಾಟೆ ನಡೆದಿತ್ತು. ರೂಬಿದೇವಿಯ ಮಾವ ಚಂದ್ರೇಶ್ವರ್ ದಾಸ್ ತನ್ನ ಕಿರಿಯ ಮಗನೊಂದಿಗೆ ಸೊಸೆಯ ಮದುವೆ ಮಾಡುತ್ತೇನೆ ಎಂದು ಹೇಳಿ ರೂಬಿದೇವಿ ಪೋಷಕರಿಗೆ ಕೇವಲ 27 ಸಾವಿರ ಹಣ ನೀಡಿದ್ದ. ಹೀಗಾಗಿ ಮಹದೇವ ಪೋಷಕರು ಹಣದ ದುರಾಸೆಗಾಗಿ ಮಗನಿಗಿಂತ ದೊಡ್ಡವರಾದ ಅತ್ತಿಗೆಯೊಂದಿಗೆ ವಿವಾಹ ಮಾಡಿಸಿದ್ದರು.
 
ರೂಬಿದೇವಿಗೆ 5 ವರ್ಷದ ಮತ್ತು 7 ವರ್ಷದ ಇಬ್ಬರು ಮಕ್ಕಳಿದ್ದಾರೆ. ಮಹದೇವ್ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ