ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್: ಪಿ.ವಿ. ಸಿಂಧುಗೆ ಸೋಲು, ಶ್ರೀಕಾಂತ್ ಪದಕದ ಭರವಸೆ

ಶುಕ್ರವಾರ, 17 ಡಿಸೆಂಬರ್ 2021 (16:44 IST)
ನವದೆಹಲಿ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಕೂಟದಲ್ಲಿ ಸತತವಾಗಿ ಮತ್ತೊಮ್ಮೆ ಚಾಂಪಿಯನ್ ಆಗುವ ಭಾರತದ ಪಿ.ವಿ. ಸಿಂಧು ಕನಸು ಭಗ್ನಗೊಂಡಿದೆ.

ಕ್ವಾರ್ಟರ್ ಫೈನಲ್ ನಲ್ಲಿ ಸಿಂಧು ಪ್ರಬಲ ಎದುರಾಳಿ ವಿಶ್ವ ನಂ.1 ತೈ ಝೂ ಯಿಂಗ್ ವಿರುದ್ಧ 17-21, 13-21 ಅಂತರದ ನೇರ ಸೆಟ್ ಗಳ ಸೋಲು ಅನುಭವಿಸಿದರು. ಇದರೊಂದಿಗೆ ಸಿಂಧು ಕನಸು ಭಗ್ನಗೊಂಡಿದೆ.

ಆದರೆ ಪುರುಷರ ವಿಭಾಗದಲ್ಲಿ ಭಾರತದ ಕಿದಂಬಿ ಶ್ರೀಕಾಂತ್ ಸೆಮಿಫೈನಲ್ ಗೇರಿದ್ದು, ಪದಕದ ಭರವಸೆ ನೀಡಿದ್ದಾರೆ. ಕ್ವಾರ್ಟರ್ ಫೈನಲ್ ನಲ್ಲಿ ಕಾಲಿಜೋ ವಿರುದ್ಧ 21-8, 21-7 ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಪುರುಷರ ವಿಭಾಗದಲ್ಲಿ ಪ್ರಕಾಶ್ ಪಡುಕೋಣೆ ಮತ್ತು ಸಾಯ್ ಪ್ರಣೀತ್ ನಂತರ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಪದಕ ಗೆಲ್ಲುತ್ತಿರುವ ಮೂರನೇ ಭಾರತೀಯ ಪುರುಷ ಬ್ಯಾಡ್ಮಿಂಟನ್ ತಾರೆ ಎಂಬ ಗೌರವ ಅವರದ್ದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ