ಓ... 2020 ಯಾಕಿಷ್ಟು ಕ್ರೂರಿಯಾದೆ?!

ಶುಕ್ರವಾರ, 8 ಮೇ 2020 (09:14 IST)
ಬೆಂಗಳೂರು: ಯಾಕೋ ಈ ವರ್ಷದ ಆರಂಭವೇ ಚೆನ್ನಾಗಿಲ್ಲವೆನಿಸುತ್ತದೆ. ಇತ್ತೀಚೆಗಷ್ಟೇ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನನಗೆ ಅವಕಾಶ ಸಿಕ್ಕರೆ 2020 ನ್ನು ಡಿಲೀಟ್ ಮಾಡಿ ಹೊಸದಾಗಿ ಮಾಡುವೆ ಎಂದಿದ್ದರು.


ನಿನ್ನೆ ವಿಶಾಖಪಟ್ಟಣದಲ್ಲಿ ನಡೆದ ದುರಂತ ನೋಡಿದರೆ ಅವರ ಮಾತು ಮತ್ತೆ ನೆನಪಾಗುತ್ತಿದೆ. ಈ ವರ್ಷ ಆರಂಭದಿಂದಲೇ ವಿಶ್ವವೇ ಹಿಂದೆಂದೂ ಕಾಣದ ಮಹಾಮಾರಿ ಕೊರೋನಾಗೆ ಸಿಕ್ಕು ನರಳುತ್ತಿದೆ. ಈಗಾಗಲೇ ಜನರ ಜೀವ, ಜೀವನ ಎಲ್ಲವೂ ಅಪಾಯದಲ್ಲಿದ್ದು, ದೈನಂದಿನ ಚಟುವಟಿಕೆಗಳೂ ಸ್ತಬ್ಧವಾಗಿದೆ.

ಈ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ವಿಶಾಖಪಟ್ಟಣದಲ್ಲಿ ವಿಷಾನಿಲ ಸೋರಿಕೆಯಾದ ಪ್ರಕರಣ ನಡೆದಿದೆ. ಈಗಾಗಲೇ ಹಲವರು ಸಾವನ್ನಪ್ಪಿದ್ದಾರೆ. ಮತ್ತೆ ಆ ಗ್ರಾಮದ ಜನರಿಗೆ ಆ ಪರಿಸರದಲ್ಲಿ ನಿಲ್ಲಲೂ ಆಗದ ಪರಿಸ್ಥಿತಿ ಎದುರಾಗಿದೆ. ಯಾಕೋ ಈ ಘಟನೆಗಳನ್ನೆಲ್ಲಾ ನೋಡುತ್ತಿದ್ದರೆ 2020 ನೇ ವರ್ಷವನ್ನು ಯಾರೂ ಮರೆಯಲಾರರು ಎನಿಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ