ತವರಿನಲ್ಲಿ ಆಡಿಸದೇ ಇರಲು ಹನುಮ ವಿಹಾರಿ ಏನು ಅಪರಾಧ ಮಾಡಿದ್ದಾರಾ?!

ಮಂಗಳವಾರ, 23 ನವೆಂಬರ್ 2021 (11:16 IST)
ಮುಂಬೈ: ಟೀಂ ಇಂಡಿಯಾ ಟೆಸ್ಟ್ ತಂಡದ ಭರವಸೆಯ ಆಟಗಾರ ಹನುಮ ವಿಹಾರಿಯನ್ನು ಆಡುವ ಬಳಗದಲ್ಲಿ ಕಡೆಗಣಿಸುವುದಕ್ಕೆ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಕಿಡಿ ಕಾರಿದ್ದಾರೆ.

ಅದರಲ್ಲೂ ನ್ಯೂಜಿಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಗೆ ಹನುಮ ವಿಹಾರಿ ಆಯ್ಕೆಯೇ ಆಗಿಲ್ಲ. ಇದರ ಬಗ್ಗೆ ಅಭಿಮಾನಿಗಳೂ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಪ್ರಶ್ನೆ ಮಾಡಿರುವ ಅಜಯ್ ಜಡೇಜಾ ‘ವಿಹಾರಿ ಪಾಪದ ಹುಡುಗ. ತಂಡದ ಪರ ಚೆನ್ನಾಗಿಯೇ ಆಡಿದ್ದರು. ಅವರು ಯಾಕೆ ಭಾರತ ಎ ತಂಡದ ಪರವಾಗಿ ಆಡಬೇಕು? ಅವರನ್ನು ತವರಿನ ಸರಣಿಯಲ್ಲಿ ಆಡಿಸದೇ ಇರುವಂತಹ ಅಪರಾಧ ಅವರೇನು ಮಾಡಿದ್ದಾರೆ?’ ಎಂದು ಜಡೇಜಾ ಆಕ್ರೋಶ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ