ಟೀಂ ಇಂಡಿಯಾಗೆ ವರುಣನ ಶಾಪ: ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯ ರದ್ದು

ಮಂಗಳವಾರ, 3 ಅಕ್ಟೋಬರ್ 2023 (17:36 IST)
ತಿರುವನಂತಪುರಂ: ಕಳೆದ ಏಷ್ಯಾ ಕಪ್ ನಿಂದ ಟೀಂ ಇಂಡಿಯಾ ಬೆನ್ನತ್ತಿರುವ ವರುಣ ಇಂದಿಗೂ ಬಿಟ್ಟಿಲ್ಲ. ಇಂದು ತಿರುವನಂತಪುರಂನಲ್ಲಿ ನಡೆಯಬೇಕಿದ್ದ ನೆದರ್ಲ್ಯಾಂಡ್ಸ್ ವಿರುದ್ಧದ ವಿಶ್ವಕಪ್ ಅಭ್ಯಾಸ ಪಂದ್ಯವೂ ಮಳೆಯಿಂದಾಗಿ ರದ್ದಾಗಿದೆ.

ಗುವಾಹಟಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಬೇಕಿದ್ದ ಅಭ್ಯಾಸ ಪಂದ್ಯಕ್ಕೂ ಮಳೆ ಅಡ್ಡಿಯಾಗಿತ್ತು. ಮೊನ್ನೆ ಟಾಸ್ ಆದರೂ ನಡೆದಿತ್ತು. ಆದರೆ ಇಂದು ಅದೂ ಕೂಡಾ ನಡೆದಿಲ್ಲ.

ಹೀಗಾಗಿ ಟೀಂ ಇಂಡಿಯಾ ಒಂದು ನಗರದಿಂದ ಇನ್ನೊಂದು ನಗರಕ್ಕೆ ವೃಥಾ ಪ್ರಯಾಣ ಮಾಡುವಂತಾಗಿದೆ. ಇಂದಿನ ಪಂದ್ಯಕ್ಕೆ ಮಳೆಯಾಗಬಹುದು ಎಂದು ಈಗಾಗಲೇ ಹವಾಮಾನ ವರದಿ ಹೇಳಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ