ಐಪಿಎಲ್ ಫೈನಲ್ ಬಳಿಕ ಗೌತಮ್ ಗಂಭೀರ್ ಜೊತೆ ಜಯ್ ಶಾ ಗಂಭೀರ ಚರ್ಚೆ

Krishnaveni K

ಸೋಮವಾರ, 27 ಮೇ 2024 (17:26 IST)
ಚೆನ್ನೈ: ಟೀಂ ಇಂಡಿಯಾ ಮುಂದಿನ ಕೋಚ್ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಕೆಕೆಆರ್ ಮೆಂಟರ್ ಗೌತಮ್ ಗಂಭೀರ್ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮೀಟಿಂಗ್ ಮಾಡಿದ್ದಾರೆ.

ಐಪಿಎಲ್ ಫೈನಲ್ ನಲ್ಲಿ ಕೆಕೆಆರ್ ಗೆಲುವಿನ ವೇಳೆ ಜಯ್ ಶಾ ಮೈದಾನದಲ್ಲಿ ಉಪಸ್ಥಿತರಿದ್ದರು. ಗೆಲುವಿನ ಬಳಿಕ ಕೆಕೆಆರ್ ಮೆಂಟರ್ ಗೌತಮ್ ಗಂಭೀರ್ ರನ್ನು ಅಭಿನಂದಿಸಿದ ಜಯ್ ಶಾ ಬಳಿಕ ಪ್ರೈವೇಟ್ ಆಗಿ ಕೆಲವು ಹೊತ್ತು ಮಾತನಾಡಿದ್ದಾರೆ.

ಕೆಕೆಆರ್ ನ್ನು ಯಶಸ್ವಿಯಾಗಿ ಐಪಿಎಲ್ ಫೈನಲ್ ಗೇರಿಸಿದ ಕೀರ್ತಿ ಗಂಭೀರ್ ಗೆ ಸಲ್ಲಬೇಕು. ಹೀಗಾಗಿ ಕೋಚ್ ಆಗಿ ಅವರನ್ನೇ ಟೀಂ ಇಂಡಿಯಾಕ್ಕೆ ಕರೆತರಲು ಮಾತುಕತೆ ನಡೆದಿರಬಹುದು ಎಂದು ವಿಶ್ಲೇಷಿಸಲಾಗಿದೆ.

ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವಧಿ ಮುಕ್ತಾಯವಾಗಲಿದೆ. ಅವರ ಬಳಿಕ ಭಾರತೀಯರನ್ನೇ ಕೋಚ್ ಆಗಿ ನೇಮಿಸಬೇಕೆಂದು ಬಿಸಿಸಿಐ ಪ್ರಯತ್ನಿಸುತ್ತಿದೆ. ಹೀಗಾಗಿ ಗಂಭೀರ್ ಜೊತೆ ಮಾತುಕತೆ ನಡೆಸಿರಬಹುದು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ