ರಾಹುಲ್ ದ್ರಾವಿಡ್ ರಿಂದಾಗಿ ಈ ಯುವ ಆಟಗಾರನಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಕ್ಕಿದೆಯಂತೆ!

ಶನಿವಾರ, 25 ಆಗಸ್ಟ್ 2018 (09:46 IST)
ಮುಂಬೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಭಾರತ ಎ ತಂಡದ ಮುಂಬೈ ಮೂಲದ ಆಟಗಾರ ಪೃಥ್ವಿ ಶಾ ಹಿಂದೆ ರಾಹುಲ್ ದ್ರಾವಿಡ್ ಇದ್ದಾರೆ ಎಂದು ಮುಂಬೈ ತಂಡದ ಆಯ್ಕೆಗಾರ ಅಜಿತ್ ಅಗರ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಪೃಥ್ವಿ ಶಾ ಒಬ್ಬ ಪರಿಪೂರ್ಣ ಬ್ಯಾಟ್ಸ್ ಮನ್ ಆಗಿ ಬೆಳೆಯಲು ದ್ರಾವಿಡ್ ಸಲಹೆ, ಮಾರ್ಗದರ್ಶನವೇ ಕಾರಣ. ದ್ರಾವಿಡ್ ರ ಮಾರ್ಗದರ್ಶನದಿಂದಲೇ ಯಶಸ್ಸು ಸಾಧಿಸಲು ಸಾಧ್ಯವಾಯಿತು. ಅದೇ ಕಾರಣಕ್ಕೆ ಅವರಿಗೆ ಇಂದು ಟೀಂ ಇಂಡಿಯಾದಲ್ಲಿ ಯಶಸ್ಸು ಸಿಕ್ಕಿದೆ ಎಂದು ಅಗರ್ಕರ್ ಖುಷಿಯಿಂದಲೇ ಹೇಳಿದ್ದಾರೆ.

ಸದ್ಯಕ್ಕೆ ದ್ರಾವಿಡ್ ‍ಗರಡಿಯಲ್ಲಿ ಪಳಗಿದ ಪೃಥ್ವಿ ಶಾ ಅಲ್ಲದೆ, ಹನುಮ ವೀರ, ರಿಷಬ್ ಪಂತ್ ಕೂಡಾ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ರಿಷಬ್ ತೃತೀಯ ಟೆಸ್ಟ್ ಪಂದ್ಯದಲ್ಲಿ ತಮ್ಮ ಪ್ರದರ್ಶನದಿಂದ ಗಮನಸೆಳೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ