ಏಕದಿನ ವಿಶ್ವಕಪ್: ಪಾಕ್ ಸೋಲಿಸಿ ಜೈ ಹನುಮಾನ್ ಎಂದ ಕೇಶವ್ ಮಹಾರಾಜ್

ಶನಿವಾರ, 28 ಅಕ್ಟೋಬರ್ 2023 (09:30 IST)
ಚೆನ್ನೈ: ಏಕದಿನ ವಿಶ್ವಕಪ್ ನಲ್ಲಿ ಪಾಕಿಸ್ತಾನವನ್ನು 1 ವಿಕೆಟ್ ಗಳಿಂದ ರೋಚಕವಾಗಿ ಸೋಲಿಸಿದ ಬಳಿಕ ದ.ಆಫ್ರಿಕಾ ತಂಡದ ಕ್ರಿಕೆಟಿಗ ಕೇಶವ್ ಮಹಾರಾಜ್ ಮಾಡಿದ ಇನ್ ಸ್ಟಾಗ್ರಾಂ ಪೋಸ್ಟ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ.

ಭಾರತೀಯ ಮೂಲದ ಕೇಶವ್ ಮಹಾರಾಜ್ ಪಾಕ್ ವಿರುದ್ಧ ಬೌಂಡರಿ ಗಳಿಸಿ ಗೆಲುವು ಖಚಿತಪಡಿಸಿದರು. ಪಾಕ್ ನೀಡಿದ್ದ 270 ರನ್ ಗಳ ಗುರಿ ಬೆನ್ನತ್ತಿದ ಆಫ್ರಿಕಾ ಸೋಲಿನ ಭೀತಿಯಲ್ಲಿತ್ತು. ಆದರೆ ಕೊನೆಯವರೆಗೂ ಹೋರಾಡಿದ ಆಫ್ರಿಕಾ 47.2 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 271 ರನ್ ಗಳಿಸಿ ಗೆಲುವು ಕಂಡಿತು. ಗೆಲುವಿನ ಬೌಂಡರಿ ಬಳಿಕ ಕೇಶವ್ ಮಹಾರಾಜ್ ಸಂಭ್ರಮ ಮುಗಿಲುಮುಟ್ಟಿತು.

ಈ ಸೋಲಿನೊಂದಿಗೆ ಪಾಕಿಸ್ತಾನದ ಸೆಮಿಫೈನಲ್ ಹಾದಿ ಬಹುತೇಕ ಬಂದ್ ಆಗಿದೆ. ಗೆಲುವಿನ ಬಳಿಕ ಕೇಶವ್ ಮಹಾರಾಜ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಜೈ ಶ್ರೀ ಹನುಮಾನ್. ಎಲ್ಲವೂ ದೇವರ ಮೇಲಿನ ವಿಶ್ವಾಸದ ಫಲ ಎಂದು ಬರೆದುಕೊಂಡಿದ್ದಾರೆ. ಕೇಶವ್ ಹಿಂದೂ ಧರ್ಮೀಯರಾಗಿದ್ದು ಅವರ ಬ್ಯಾಟ್ ಮೇಲೂ ಓಂ ಚಿಹ್ನೆ ಹಾಕಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ