ಸೂರ್ಯಕುಮಾರ್ ಕಳಪೆ ಫಾರ್ಮ್ ಅಜಿಂಕ್ಯಾ ರೆಹಾನೆಗೆ ಲಾಭ

ಶನಿವಾರ, 15 ಏಪ್ರಿಲ್ 2023 (08:50 IST)
ಮುಂಬೈ: ಐಪಿಎಲ್ ಮುಗಿದೊಡನೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಟೀಂ ಇಂಡಿಯಾ ಆಯ್ಕೆಗೆ ಬಿಸಿಸಿಐ ಈಗಲೇ ಆಟಗಾರರ ಮೇಲೆ ನಿಗಾ ಇಟ್ಟಿದೆ.

ಶ್ರೇಯಸ್ ಅಯ್ಯರ್ ಗಾಯಗೊಂಡಿರುವುದರಿಂದ ಆ ಸ್ಥಾನಕ್ಕೆ ಟೀಂ ಇಂಡಿಯಾದಲ್ಲಿ ಇನ್ನೊಬ್ಬ ಆಟಗಾರನ ಆಯ್ಕೆಯಾಗಬೇಕಿದೆ. ಕಳೆದ ಆಸ್ಟ್ರೇಲಿಯಾ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಅವಕಾಶ ಪಡೆದಿದ್ದರು. ಆದರೆ ಸೂರ್ಯ ಕಳಪೆ ಫಾರ್ಮ್ ಐಪಿಎಲ್ ನಲ್ಲೂ ಮುಂದುವರಿದಿದೆ.

ಇನ್ನೊಂದೆಡೆ ಟೆಸ್ಟ್ ಸ್ಪೆಷಲಿಸ್ಟ್ ಅಜಿಂಕ್ಯಾ ರೆಹಾನ್ ಐಪಿಎಲ್ ನಲ್ಲೂ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದಾರೆ. ಹೀಗಾಗಿ ಅವರಿಗೆ ಮತ್ತೆ ಟೆಸ್ಟ್ ತಂಡದಲ್ಲಿ ಅವಕಾಶ ಸಿಗುವ ಸಾಧ‍್ಯತೆಯೂ ಇಲ್ಲದಿಲ್ಲ. ಹೀಗಾಗಿ ಸೂರ್ಯ ಮುಂದೆಯೂ ಫಾರ್ಮ್ ಕಂಡುಕೊಳ್ಳದೇ ಹೋದರೆ ರೆಹಾನೆಗೆ ಲಾಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ