ರಣಜಿ ಟ್ರೋಫಿ ಫೈನಲ್: ಕ್ಲಿಕ್ ಆಗದ ಚೇತೇಶ್ವರ ಪೂಜಾರ, ವಿದರ್ಭಕ್ಕೆ ಕಿರೀಟ

ಗುರುವಾರ, 7 ಫೆಬ್ರವರಿ 2019 (15:33 IST)
ನಾಗ್ಪುರ: ಇಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರವನ್ನು 78 ರನ್ ಗಳಿಂದ ಸೋಲಿಸಿದ ಹಾಲಿ ಚಾಂಪಿಯನ್ ವಿದರ್ಭ ಸತತ ಎರಡನೇ ಬಾರಿಗೆ ರಣಜಿ ಟ್ರೋಫಿ ಗೆದ್ದು ಬೀಗಿತು.


ವಿದರ್ಭ ಮೊದಲ ಇನಿಂಗ್ಸ್ ನಲ್ಲಿ 312 ರನ್ ಮತ್ತು ದ್ವಿತೀಯ ಇನಿಂಗ್ಸ್ ನಲ್ಲಿ 200 ರನ್ ಗಳಿಸಿತ್ತು. ಆದರೆ ಸೌರಾಷ್ಟ್ರ ಮೊದಲ ಇನಿಂಗ್ಸ್ ನಲ್ಲಿ 307 ಮತ್ತು ದ್ವಿತೀಯ ಇನಿಂಗ್ಸ್ ನಲ್ಲಿ 127 ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.

ಸೌರಾಷ್ಟ್ರಕ್ಕೆ ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಎರಡೂ ಇನಿಂಗ್ಸ್ ಗಳಲ್ಲಿ ವಿಫಲರಾಗಿದ್ದು ಭಾರೀ ಹೊಡೆತ ನೀಡಿತು. ಮೊದಲ ಇನಿಂಗ್ಸ್ ನಲ್ಲಿ 1 ರನ್ ಗಳಿಸಿದ್ದ ಪೂಜಾರ ದ್ವಿತೀಯ ಇನಿಂಗ್ಸ್ ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಇದರೊಂದಿಗೆ ಚೊಚ್ಚಲ ರಣಜಿ ಟ್ರೋಫಿ ಎತ್ತಿಕೊಳ್ಳುವ  ಅವರ ಕನಸು ಕನಸಾಗಿಯೇ ಉಳಿಯಿತು. ವಿದರ್ಭ ಪರ ಆದಿತ್ಯ ಸರ್ವಟೆ ದ್ವಿತೀಯ ಇನಿಂಗ್ಸ್ ನಲ್ಲಿ 6 ವಿಕೆಟ್ ಕಿತ್ತು ಪಂದ್ಯ ಶ್ರೇಷ್ಠರಾದರು. ಇದರೊಂದಿಗೆ ಸತತ ಎರಡನೇ ಬಾರಿ ವಿದರ್ಭ ಚಾಂಪಿಯನ್ ಆಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ