ಅಯ್ಯಪ್ಪನಮ್ ಕೋಶ್ಯಂ’ ಚಿತ್ರದ ತಂತ್ರಜ್ಞರ ಪಟ್ಟಿಯಲ್ಲಿ ಸಾಹಿತ್ಯಗಾರರ ಹೆಸರು ಉಲ್ಲೇಖಗೊಂಡಿಲ್ಲ ಯಾಕೆ ಗೊತ್ತಾ?

ಗುರುವಾರ, 24 ಡಿಸೆಂಬರ್ 2020 (11:16 IST)
ಹೈದರಾಬಾದ್ : ‘ಅಯ್ಯಪ್ಪನಮ್ ಕೋಶ್ಯಂ’ ಚಿತ್ರಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳಿಂದ ನಡೆಯುತ್ತಿದ್ದ ಎರಡನೇ ಹೀರೋ ಆಯ್ಕೆ ಕೆಲಸ ಮುಗಿದಿದೆ. ಆ ಮೂಲಕ 2ನೇ ಹೀರೋ ಆಗಿ ರಾಣಾ ದಗ್ಗುಬಾಟಿ ಈ ಚಿತ್ರಕ್ಕೆ ಸೇರ್ಪಡೆಯಾಗಿದ್ದಾರೆ. ಇದೀಗ ಮೂವಿ ಮೇಕರ್ಸ್ ವಿಡಿಯೋ ಬೈಟ್ ನ್ನು ಬಿಡುಗಡೆ ಮಾಡಿದ್ದು, ಇದು ಈಗ ಚರ್ಚೆಗೆ ಕಾರಣವಾಗಿದೆ.

ಈ ಚಿತ್ರದ ನಾಯಕ ಪವನ್ ಕಲ್ಯಾಣ್, ರಾಣಾ ದಗ್ಗುಬಾಟಿ, ಸಂಗೀತ ನಿರ್ದೇಶಕರು, ನಿರ್ದೇಶಕರ ಹೆಸರನ್ನು ತಂತ್ರಜ್ಞರ ಪಟ್ಟಿಯಲ್ಲಿ ಸೇರಿಸಲಾಗಿದೆ. ಆದರೆ ಈ ಚಿತ್ರ ಬರೆದ ತ್ರಿವಿಕ್ರಮ್ ಅವರ ಹೆಸರನ್ನು ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಅಲ್ಲದೇ ವಿಡಿಯೋದಲ್ಲಿ ಕೂಡ ಅವರ ಹೆಸರು ಉಲ್ಲೇಖವಾಗಿಲ್ಲ ಎಂಬ ಚರ್ಚೆ ನಡೆಯುತ್ತಿದೆ.

ಆದರೆ ಮಾಹಿತಿ ಪ್ರಕಾರ ತ್ರಿವಿಕ್ರಮ್ ಅವರು ಚಿತ್ರಕ್ಕೆ ಸಾಹಿತ್ಯ ಬರೆಯುವುದಷ್ಟೇ ಅಲ್ಲ, ಚಿತ್ರಕಥೆ ಬರೆಯುವವರಾಗಿಯೂ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಅವರ ಹೆಸರನ್ನು ತಂತ್ರಜ್ಞರ ಪಟ್ಟಿಯಲ್ಲಿ ಸರಳವಾಗಿ ಘೋಷಿಸಲು ಇಷ್ಟವಾಗದೆ ವಿಶೇಷವಾಗಿ ಘೋಷಿಸುವ ಯೋಜನೆ ಮಾಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ