BJP JDS ಮೈತ್ರಿ ಮತ್ತಷ್ಟು ಸ್ಥಾನಕ್ಕೆ JDS ಒತ್ತಡ ಸಾಧ್ಯತೆ

ಶನಿವಾರ, 9 ಸೆಪ್ಟಂಬರ್ 2023 (20:11 IST)
ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ BJP JDS ಮೈತ್ರಿ  ಮಾತುಕತೆ ನಡೆಯುತ್ತಿದೆ. ಜೆಡಿಎಸ್ಗೆ ನಾಲ್ಕು ಸೀಟು ಬಿಟ್ಟು ಕೊಡಲು ಅಮಿತ್ ಶಾ ಹೇಳಿದ್ದಾಗಿ ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪ ಬಹಿರಂಗಪಡಿಸಿದ್ದಾರೆ. ಒಂದೊಮ್ಮೆ ಈ ಮೈತ್ರಿ ಮಾತುಕತೆ ಯಶಸ್ವಿಯಾದರೆ ಕರ್ನಾಟಕದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದೇ ಒಂದು ಸೀಟು ಗೆಲ್ಲದಂತೆ ಮಾಡಲು ಅನುಕೂಲವಾಗಲಿದೆ ಎಂದು ಲೆಕ್ಕಾಚಾರವಾಗಿದೆ.ಆದರೆ, ಜೆಡಿಎಸ್ ಕೇಳಿದಷ್ಟು ಸೀಟುಗಳನ್ನು ಬಿಟ್ಟುಕೊಡಲು ಬಿಜೆಪಿ ರಾಜ್ಯ ನಾಯಕರು ಒಲವು ಹೊಂದಿಲ್ಲ ಎಂದು ತಿಳಿದುಬಂದಿದೆ. ಕನಿಷ್ಠ 2 ಹಾಗೂ ಗರಿಷ್ಠ 3 ಸೀಟುಗಳನ್ನು ಮಾತ್ರ ಬಿಟ್ಟು ಕೊಡಲು ಒಲವು ಹೊಂದಿದ್ದಾರೆ. ಆದರೆ, ಮೈತ್ರಿ ಯಶಸ್ವಿಯಾಗಬೇಕಾದರೆ ಸೀಟುಗಳ ಹಂಚಿಕೆಯಲ್ಲಿ ತೃಪ್ತಿ ತರಬೇಕು. ಒಂದೊಮ್ಮೆ ಹೆಚ್ಚಿನ ಸ್ಥಾನಗಳಿಗಾಗಿ ಜೆಡಿಎಸ್ ಬೇಡಿಕೆ ಇಟ್ಟರೆ ಏನು ಮಾಡೋದು ಎಂಬ ಚಿಂತೆ ಬಿಜೆಪಿ ನಾಯಕರನ್ನು ಕಾಡ್ತಿದೆ ಎಂಬುದು ಮೆಲ್ನೋಟಕ್ಕೆ ಕಂಡು ನಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ