ಓರ್ವ ಪತ್ತೆ, ಮತ್ತೋರ್ವನಿಗಾಗಿ ಶೋಧ

ಶನಿವಾರ, 15 ಅಕ್ಟೋಬರ್ 2022 (17:51 IST)
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಇನ್ನು ಮಳೆ ಅವಾಂತರದಿಂದ, ಜಿಲ್ಲೆಯ ಗೌರಿಬಿದನೂರು ಬಳಿ ಇರೋ  ಕುಮದ್ವತಿ ನದಿ ಮೈದುಂಬಿ ಹರಿಯುತ್ತಿದೆ..ಇನ್ನು ರಭಸವಾಗಿ ಹರಿಯುತ್ತಿರುವ ನದಿಯಲ್ಲಿ ಗೌರಿಬಿದನೂರಿನ ‌ಇಡಗೂರು-ಜಾಲಹಳ್ಳಿ ಬಳಿ ರಸ್ತೆ ದಾಟಲು ಹೋಗಿ ಬೈಕ್ ಸಮೇತ ಇಬ್ಬರು ಸವಾರರು ಕೊಚ್ಚಿಹೋಗಿದ್ದಾರೆ. ಅದ್ರಲ್ಲಿ ಓರ್ವ ಸವಾರ ಪ್ರಶಾಂತ್ ಎಂಬಾತನ ರಕ್ಷಣೆ ಮಾಡಿದ್ದು ಮತ್ತೋರ್ವ ಸವಾರ ನಾಪತ್ತೆಯಾಗಿದ್ದಾನೆ.ಇನ್ನು ನಾಪತ್ತೆಯಾಗಿರುವ ಪ್ರಶಾಂತ್‌ ಭಾಮೈದನಿಗಾಗಿ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧಕಾರ್ಯ ಆರಂಭವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ