ಚಾಕು ಇರಿದು ದೋಚಿದ್ದು ಎಷ್ಟು ಲಕ್ಷ ಹಣ ಗೊತ್ತಾ? ಶಾಕಿಂಗ್

ಮಂಗಳವಾರ, 4 ಜೂನ್ 2019 (16:00 IST)
ಚಾಕು ಇರಿದು ಲಕ್ಷ ಲಕ್ಷ ಹಣ ದೋಚಿ ಪರಾರಿಯಾದ ಘಟನೆ ನಡೆದಿದೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದ ಸಂಜೀವಿನಿ ಆಸ್ಪತ್ರೆ ಹಿಂಭಾಗದ ರಸ್ತೆಯಲ್ಲಿ ಘಟನೆ ನಡೆದಿದೆ.
ರಾತ್ರಿ ಸುಮಾರು 8.10 ರಲ್ಲಿ‌ ನಡೆದ ಘಟನೆ ಇದಾಗಿದೆ.

ಚಾಕುವಿನಿಂದ ಇರಿದು ಬೈಕ್ ನಲ್ಲಿ ಪರಾರಿಯಾದ ದರೋಡೆಕೋರರಿಂದ ವಾಲಿಸಾಬ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾನೆ.
ಹೊಸದುರ್ಗ ದಿಂದ ಹಿರಿಯೂರಿಗೆ ಬಂದು ಮನೆಗೆ ಆಟೋದಲ್ಲಿ ಹೋದಾಗ ಮನೆ ಮುಂಭಾಗದಲ್ಲಿ ನಡೆದ ಘಟನೆ ಇದಾಗಿದ್ದು, 25 ಲಕ್ಷ ರೂ. ದೋಚಿ ಪಲ್ಸರ್ ಬೈಕ್ ನಲ್ಲಿ ಬಂದಿದ್ದ ದುರ್ಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮೂರು ಜನರಿಂದ ಕೃತ್ಯ ನಡೆದಿದೆ.

ಹಿರಿಯೂರು  ಪ್ರಾವಿಷನ್ ಸ್ಟೋರ್  ಮಾಲೀಕ  ಗಾಯಗೊಂಡಿದ್ದು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಾಲಿಸಾಬ್ ಹೋಲ್ ಸೇಲ್ ಗುಟ್ಕಾ,  ವ್ಯಾಪರಿಯಾಗಿದ್ದಾರೆ. ಬೈಕ್ ನಲ್ಲಿ ಎಸ್ಕೇಪ್ ಆದ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ