ಕ್ರಿಕೆಟಿಗರಿಗೆ ಸಿಕ್ಕ ಸ್ವಾಗತವಿಲ್ಲ, ಒಲಿಂಪಿಕ್ಸ್ ಪದಕ ವಿಜೇತ ಹಾಕಿ ತಂಡಕ್ಕೆ ಹೀಗೇಕೆ ಮಾಡಿದಿರಿ

Krishnaveni K

ಶನಿವಾರ, 10 ಆಗಸ್ಟ್ 2024 (17:29 IST)
ನವದೆಹಲಿ: ಇತ್ತೀಚೆಗೆ ಪ್ಯಾರಿಸ್ ಒಲಿಂಪಿಕ್ಸ್ ಪುರುಷರ ಹಾಕಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದ ಕೆಲವು ಆಟಗಾರರು ತವರಿಗೆ ಮರಳಿದ್ದಾರೆ. ಆದರೆ ಅವರಿಗೆ ಕ್ರಿಕೆಟಿಗರಿಗೆ ಸಿಕ್ಕ ಸ್ವಾಗತವಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.

ಟಿ20 ವಿಶ್ವಕಪ್ ಗೆದ್ದ ರೋಹಿತ್ ಶರ್ಮಾ ಬಳಗ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಭಾರೀ ಸ್ವಾಗತ ದೊರೆಯಿತು. ಅವರನ್ನು ವಿಶೇಷ ಬಸ್ ನಲ್ಲಿ ಹೋಟೆಲ್ ರೂಂಗೆ ಕರದೊಯ್ದು ಬಳಿಕ ಪ್ರಧಾನಿ ನಿವಾಸಕ್ಕೆ ಕರೆದೊಯ್ಯಲು ಬಿಸಿಸಿಐ ಎಲ್ಲಾ ವ್ಯವಸ್ಥೆ ಮಾಡಿತ್ತು. ಸಾಕಷ್ಟು ಜನರೂ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದರು.

ಆದರೆ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದು ಬಂದ ಭಾರತೀಯ ಹಾಕಿ ತಂಡದ ಆಟಗಾರರಿಗೆ ಅಂತಹ ಸ್ವಾಗತ ದೊರೆತಿಲ್ಲ ಎಂದು ಆಕ್ರೋಶ ಕೇಳಿಬಂದಿದೆ. ಕೆಲವು ಮಂದಿ ಏರ್ ಪೋರ್ಟ್ ನಲ್ಲಿದ್ದು ಹಾಕಿ ಆಟಗಾರರನ್ನು ಸ್ವಾಗತಿಸಿದ್ದಾರೆ. ಬಳಿಕ ಅವರನ್ನು ಸಾಮಾನ್ಯ ಬಸ್ ನಲ್ಲಿ ಕರೆದೊಯ್ಯಲಾಗಿದೆ.

ಇದನ್ನು ಹೊರತುಪಡಿಸಿ ದೊಡ್ಡ ಸಂಭ್ರಮವೇನೂ ಕಂಡುಬಂದಿಲ್ಲ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋಲ್ ಕೀಪರ್ ಶ್ರೀಜೇಶ್ ಸೇರಿದಂತೆ ಕೆಲವು ಆಟಗಾರರು ನಾಳೆಯವರೆಗೆ ಪ್ಯಾರಿಸ್ ನಲ್ಲೇ ಇರಲಿದ್ದು, ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ತವರಿಗೆ ಮರಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ