ಭಾರತ-ಪಾಕ್ ವಿಶ್ವಕಪ್ ಕ್ರಿಕೆಟ್: ಸಚಿನ್ ಗೆ ಮಾತಿನ ಪೆಟ್ಟುಕೊಟ್ಟ ಸೌರವ್ ಗಂಗೂಲಿ!

ಭಾನುವಾರ, 24 ಫೆಬ್ರವರಿ 2019 (11:44 IST)
ಕೋಲ್ಕೊತ್ತಾ: ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಆಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಗೆ ಮಾಜಿ ನಾಯಕ ಸೌರವ್ ಗಂಗೂಲಿ ಮಾತಿನ ಪೆಟ್ಟು ಕೊಟ್ಟಿದ್ದಾರೆ.


ಪಾಕ್ ವಿರುದ್ಧ ಆಡದೇ ಅವರಿಗೆ ಎರಡು ಪಾಯಿಂಟ್ ಬಿಟ್ಟುಕೊಟ್ಟು ಪಂದ್ಯ ಕಳೆದುಕೊಳ್ಳುವುದು ನನಗಿಷ್ಟವಿಲ್ಲ. ನಾವು ಮತ್ತೆ ಪಾಕಿಸ್ತಾನವನ್ನು ಸೋಲಿಸುವ ಅವಕಾಶ ಎದುರಾಗಿದೆ ಎಂದು ಸಚಿನ್ ಹೇಳಿದ್ದರು.

ಸಚಿನ್ ಹೇಳಿಕೆಗೆ ಖಾಸಗಿ ವಾಹಿನಿಯೊಂದರಲ್ಲಿ ಪ್ರತಿಕ್ರಿಯಿಸಿದ ಗಂಗೂಲಿ ‘ಸಚಿನ್ ಗೆ ಎರಡು ಪಾಯಿಂಟ್ ಮಾತ್ರ ಬೇಕು. ಆದರೆ ನನಗೆ ವಿಶ್ವಕಪ್ಪೇ ಬೇಕು’ ಎಂದಿದ್ದಾರೆ. ಅಷ್ಟೇ ಅಲ್ಲದೆ, ಉಭಯ ದೇಶಗಳು ಮುಖಾಮುಖಿಯಾಗಬೇಕೇ ಬೇಡವೇ ಎಂಬುದನ್ನು ಭಾರತ ಸರ್ಕಾರ ನಿರ್ಧರಿಸುತ್ತದೆ ಎಂದಿದ್ದಾರೆ. ಇದಕ್ಕೂ ಮೊದಲು ಗಂಗೂಲಿ ಪಾಕ್ ನೊಂದಿಗೆ ಕ್ರಿಕೆಟ್ ಮಾತ್ರವಲ್ಲ, ಯಾವುದೇ ಕ್ರೀಡಾ ಸಂಬಂಧ ಇಟ್ಟುಕೊಳ್ಳಬಾರದು ಎಂದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ