ದೆಹಲಿ ಮಾಲಿನ್ಯ ಬಗ್ಗೆ ಗಂಗೂಲಿ ಜತೆ ಚರ್ಚೆ ನಡೆಸಿದ ರೋಹಿತ್ ಶರ್ಮಾ

ಶನಿವಾರ, 2 ನವೆಂಬರ್ 2019 (08:20 IST)
ನವದೆಹಲಿ: ದೆಹಲಿಯಲ್ಲಿ ನಾಳೆ ನಡೆಯಲಿರುವ ಭಾರತ-ಬಾಂಗ್ಲಾದೇಶ ಟಿ20 ಪಂದ್ಯಕ್ಕೆ ಹೊಗೆಯುಕ್ತ ವಾತಾವರಣವೇ ದೊಡ್ಡ ತಲೆನೋವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಜತೆ ಮಾತುಕತೆ ನಡೆಸಿದ್ದಾರೆ.


ದೆಹಲಿಯಲ್ಲಿ ಅಭ್ಯಾಸ ನಡೆಸುವಾಗ ಭಾರತ ಮತ್ತು ಬಾಂಗ್ಲಾ ಆಟಗಾರರು ಮಾಸ್ಕ್ ಧರಿಸಿ ಅಭ್ಯಾಸ ನಡೆಸಿದ್ದರು. ಪತ್ರಿಕಾಗೋಷ್ಠಿಯಲ್ಲೂ ಈ ಬಗ್ಗೆ ಕೇಳಿದಾಗ ಇಲ್ಲಿ ಆಡಲು ನಮಗೆ ಸಮಸ್ಯೆಯಿಲ್ಲ ಎಂದು ರೋಹಿತ್ ತಿಳಿಸಿದ್ದರು.

ಈ ಕುರಿತಂತೆ ಗಂಗೂಲಿ ಜತೆ ಚರ್ಚೆ ನಡೆಸಿರುವ ಅವರು ಇಲ್ಲಿ ಆಡುವುದಕ್ಕೆ ನಮ್ಮ ಕ್ರಿಕೆಟಿಗರಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ