ಅಡುಗೆ ಸರಿ ಮಾಡಿಲ್ಲ ಅಂತ ಪತ್ನಿಯನ್ನೇ ಕೊಂದ ಭೂಪ

ಗುರುವಾರ, 1 ಆಗಸ್ಟ್ 2019 (17:26 IST)
ಅಡುಗೆ ವಿಷಯಕ್ಕೆ ನಡೆದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ.

ಗಂಡನಿಂದಲೇ ಪತ್ನಿಯ ಭೀಕರ  ಕೊಲೆ ನಡೆದಿದೆ. ಅಡುಗೆ  ವಿಚಾರಕ್ಕೆ ಗಲಾಟೆ‌ ನಡೆದು ಕೊನೆಗೆ ಅದು ಕೊಲೆಯಲ್ಲಿ ಅಂತ್ಯಗೊಂಡಿದೆ.

ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಶಿಕಾರಿಪಾಳ್ಯದಲ್ಲಿ ಘಟನೆ ನಡೆದಿದೆ.

ಮೀನಾ ಕಥನ್ ಕೊಲೆಯಾದ ದುರ್ದೈವಿಯಾಗಿದ್ದು, ಕೊಲೆ ಅರೋಪಿ  ಶೇಕ್ ನನ್ನು  ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿಕಾರಿಪಾಳ್ಯದ ಮಲ್ಲಣ್ಣ ಎಂಬುವರ ಬಾಡಿಗೆ ಮನೆಯಲ್ಲಿ ಮೂರು ವರ್ಷಗಳಿಂದ ವಾಸವಾಗಿದ್ದ ದಂಪತಿ. ಪಶ್ಚಿಮ ಬಂಗಾಳ ಮೂಲದವರಾಗಿದ್ದಾರೆ.

ಸ್ಥಳಕ್ಕೆ ಡಿವೈ ಎಸ್ಪಿ ನಂಜುಂಡೇಗೌಡ ಹಾಗೂ  ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ