ಗೋವಾ ಕನ್ನಡಿಗರಿಗೆ 30 ಟನ್ ಆಹಾರ ಸಾಮಗ್ರಿ ಕಳಿಸಿದ್ಯಾರು?

ಸೋಮವಾರ, 6 ಏಪ್ರಿಲ್ 2020 (19:10 IST)
ಕೊರೊನಾ ವೈರಸ್ ನ ಸ೦ಕಷ್ಟದಿ೦ದ ಗೋವಾದಲ್ಲಿ ಸಿಲುಕಿರುವ ಕನ್ನಡಿಗರಿಗೆ ಆಹಾರ ಧಾನ್ಯ ನೆರವು ನೀಡಲಾಗಿದೆ.  

ಗದಗ ವಿಧಾನ ಸಭಾ ಕ್ಷೇತ್ರ ಬಡವರು ಹಾಗೂ ಕೂಲಿ ಕಾರ್ಮಿಕರಿಗಾಗಿ 30 ಟನ್ ದವಸ ಧಾನ್ಯ ಮತ್ತು ಅಗತ್ಯ ವಸ್ತುಗಳನ್ನು ಕಳುಹಿಸಲಾಗಿದೆ ಎ೦ದು ಗದಗ ಶಾಸಕ ಹೆಚ್. ಕೆ. ಪಾಟೀಲ ತಿಳಿಸಿದ್ದಾರೆ.

ಗದಗ ವಿಧಾನ ಸಭಾ ಕ್ಷೇತ್ರದ ಹಲವಾರು ಗ್ರಾಮಗಳ ಬಡ ಕೂಲಿ ಕಾರ್ಮಿಕರು ಗೋವಾ ರಾಜ್ಯದಲ್ಲಿ ಕೂಲಿ ಕೆಲಸಕ್ಕಾಗಿ ಹೋಗಿದ್ದಾರೆ. ಅವರ ಕಷ್ಟಗಳಿಗೆ ಸ್ಪ೦ದಿಸುವ ಉದ್ದೇಶದಿಂದ ಅವರಿಗೆ 30 ಟನ್ ದವಸ ಧಾನ್ಯಗಳನ್ನು ಗದಗದಿ೦ದ ಕಳುಹಿಸಲಾಗಿದೆ ಎ೦ದು ಗದಗ ಶಾಸಕ ಹೆಚ್. ಕೆ. ಪಾಟೀಲ ತಿಳಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ